ನೇತ್ರಾವತಿ: ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಇಂದು ಮತ್ತೆ ಮಹಜರು ಕಾರ್ಯವನ್ನು ಎಸ್.ಐ.ಟಿ ಅಧಿಕಾರಿಗಳು ಆರಂಭಿಸಿದ್ದಾರೆ. ಸೌಜನ್ಯ ಮಾವ ವಿಠಲ ಗೌಡನನ್ನು ಎಸ್.ಐ.ಟಿ ಅಧಿಕಾರಿಗಳು ಬಂಗ್ಲೆಗುಡ್ಡೆಗೆ ಕರೆತಂದಿದ್ದು, ಎಸ್.ಐ.ಟಿ ಎಸ್.ಪಿ. ಸೈಮನ್ ನೇತೃತ್ವದಲ್ಲಿ ಮಹಜರು ಕಾರ್ಯ ನಡೆಯುತ್ತಿದೆ. ವಿಠಲ ಗೌಡನ ಸಹಚರ ಪ್ರದೀಪ್ ಗೌಡನನ್ನು ಮಹಜರು ಕಾರ್ಯಕ್ಕೆ ಕರೆತಂದಿಲ್ಲ ಅನ್ನುವ ಮಾಹಿತಿ ಸುದ್ದಿಗೆ ಲಭ್ಯವಾಗಿದೆ.
ಬಂಗ್ಲೆಗುಡ್ಡೆಯಲ್ಲಿ ಮತ್ತೆ ಮಹಜರು: ವಿಠಲ್ ಗೌಡನನ್ನು ಕರೆ ತಂದ ಅಧಿಕಾರಿಗಳು-ಪ್ರದೀಪ್ ನನ್ನು ಕರೆತರದ ಅಧಿಕಾರಿಗಳು
