Site icon Suddi Belthangady

ಓಡೀಲು: ಪೌರ ಸನ್ಮಾನ ಹಾಗೂ ವೀರ ಸಿಂಧೂರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಓಡೀಲು: ದಕ್ಷಿಣ ಕನ್ನಡ ಬೆಳ್ತಂಗಡಿ ಘಟಕ ಸಂಸ್ಕಾರ ಭಾರತಿ, ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಭಾರತೀಯ ಭೂಸೇನೆಯಲ್ಲಿ 37 ವರ್ಷ ಭಾರತಮಾತೆಯ ಸೇವೆಗೈದು ನಿವೃತ್ತಿ ಹೊಂದಿದ ಸುವರ್ಣ ವಿ. ವರಕಬೆ ಅವರಿಗೆ ಪೌರ ಸನ್ಮಾನ ಹಾಗೂ ವೀರ ಸಿಂಧೂರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸೆ.2ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರ ಓಡೀಲುವಿನಲ್ಲಿ ನಡೆಯಿತು.

ಸಂಸ್ಕಾರ ಭಾರತಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸೈನಿಕರ‌‌ ಸoಘದ ಪ್ರಮುಖರು ಸೂರಪ್ಪ ಗೌಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಅಲ್ಲಂದೋಡಿ‌ ಉಪಾಧ್ಯಕ್ಷರಾದ ರುದೇಶ್ ಕುಮಾರ್, ಯಶೋದರ ಶೆಟ್ಟಿ ಅರ್ಕಜೆ, ನವೀನ್ ಪಡಂಗಡಿ, ಸoತೋಷ್ ಕುಮಾರ್ ಜೈನ್ ಪಡoಗಡಿ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಕುಲಾಲ್, ಪ್ರಮುಖರಾದ ಆನಂದ ಶೆಟ್ಟಿ ವಾತ್ಸಲ್ಯ, ಎಸ್. ಗಂಗಾಧರ ರಾವ್ ಕೆವುಡೇಲು, ವಿವೇಕಾನಂದ ಶೆಣೈ ಮದ್ದಡ್ಕ, ಶ್ರೀಧರ ಪೂಜಾರಿ ವರಕಬೆ, ಗಂಗಾಧರ ಪೂಜಾರಿ ವರಕಬೆ, ಅಶ್ವಿತ್ ಕುಲಾಲ್ ಓಡೀಲು, ಸಂದೇಶ್ ಅನಿಲ, ಯೋಗೇಶ್ ಶೆಟ್ಟಿ ಅನಿಲ, ಮನಮೋಹನ್ ನಾಯಕ್, ಗಣೇಶ್ ಶೆಟ್ಟಿ ಅರ್ಕಜೆ, ವಿಠಲ ಆಚಾರ್ಯ ಗುರುವಾಯನಕೆರೆ, ಜಯರಾಮ್ ಶೆಟ್ಟಿ ಕೆoಬರ್ಜೆ ಮತ್ತಿತರರು ಉಪಸ್ಥಿತರಿದ್ದರು.

✍️ಮನು ಮದ್ದಡ್ಕ

Exit mobile version