Site icon Suddi Belthangady

ಉಜಿರೆಯ ಹಳ್ಳಿಮನೆ ಹೊಟೇಲ್ ನಲ್ಲಿ‌ ಬುರುಡೆ ಚಿನ್ನಯ್ಯನ ಮಹಜರು-ಬಾಡಿಗೆ ಪಡೆದು ರೂಂನಲ್ಲಿ ತಂಗಿದ್ದ ಹಿನ್ನಲೆಯಲ್ಲಿ ಮಹಜರು

ಉಜಿರೆ: ಎಸ್. ಐ. ಟಿ ಅಧಿಕಾರಿಗಳು ಸೆ. 1ರಂದು ಉಜಿರೆಯ ಹಳ್ಳಿಮನೆ ಹೊಟೇಲ್ ನಲ್ಲಿ ಬುರುಡೆ ಚಿನ್ನಯ್ಯನ ಕರೆದುಕೊಂಡು ಹೋಗಿ ಮಹಜರು ನಡೆಸುತ್ತಿದ್ದಾರೆ.

ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿನ್ನಯ್ಯನನ್ನು ಕರೆದುಕೊಂಡು ಬಂದ ಎಸ್ಐಟಿ ಅಧಿಕಾರಿಗಳು, ಆತ ಕೆಲ ದಿನಗಳ ಕಾಲ ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಹಳ್ಳಿಮನೆ ಹೊಟೇಲ್ ನಲ್ಲಿ ಬಾಡಿಗೆ ರೂಂ ಪಡೆದು ಉಳಿದುಕೊಂಡಿರುವ ಮಾಹಿತಿ ನೀಡಿದ್ದರಿಂದ ಮಹಜರು ಕಾರ್ಯ ನಡೆಯುತ್ತಿದೆ.

Exit mobile version