ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ಆ.24ರಂದು ನಡೆಯಿತು.
ಸಂಘದ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಒಟ್ಟು 3226 ಸದಸ್ಯರನ್ನು ಹೊಂದಿದ್ದು 91,46,33,108/- ದುಡಿಯುವ ಬಂಡವಾಳ ಹೊಂದಿದೆ. ಈ ಸಾಲಿನಲ್ಲಿ ಒಟ್ಟು ರೂ. 51 ಕೋಟಿ ಠೇವಣಿ ಸಂಗ್ರಹಗೊಂಡು ರೂ. 358.75 ಕೋಟಿ ವಾರ್ಷಿಕ ವ್ಯವಹಾರ ನಡೆಸಿ 1ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 20 ಡಿವಿಡೆಂಡ್ ನೀಡಲಾಗುವುದು ಎಂದರು.
ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ, ನಿರ್ದೇಶಕರಾದ ಎನ್.ಸೀತಾರಾಮ್ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ದೇವಕಿ ಶೆಟ್ಟಿ, ಸುಜಾತಾ, ಕೃಷ್ಣಪ್ಪ, ರಾಜೇಶ್ ಎನ್. ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ ಕುಮಾರ್, ವಿಜಯ ನಾಯ್ಕ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯು.ಶೇಕ್ ಲತಿಫ್ ಸಿಬ್ಬಂದಿಗಳಾದ ರೋಹಿಣಿ, ವೀರೇಂದ್ರ ಕುಮಾರ್, ಕವಿತಾ,ಅಕ್ಷತಾ, ನಾಗೇಶ್ ಪೂಜಾರಿ, ರಮ್ಯಾ, ನಂದೀಶ್, ಅಖಿಲೇಶ್ ಕುಮಾರ್, ಗಿರೀಶ್, ಸತೀಶ್, ಮನೋಜ್ ಕುಮಾರ್, ಹರ್ಷಲಾ ವಿ. ಜೈನ್, ಸುಜಿತ್ ಕುಮಾರ್ ಸಹಕರಿಸಿದರು. ಮಹಾ ಸಭೆಯಲ್ಲಿ ಮಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಮರೋಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭರಾಜ್ ಹೆಗ್ಡೆ, ನಿವೃತ್ತ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಕಾಶಿಪಟ್ಣ ಗ್ರಾ.ಪಂ. ಉಪಾಧ್ಯಕ್ಷರು ಶುಭಾವಿ, ಕಾಶಿಪಟ್ಣ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶಿಲ್ಪಾ,ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರುಗಳು, ಮರೋಡಿ, ಕಾಶಿಪಟ್ಣ, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
5 ಗ್ರಾಮಗಳ ವ್ಯಾಪ್ತಿಯಲ್ಲಿಉನ್ನತ ಶಿಕ್ಷಣ ದಲ್ಲಿ ಅತ್ಯುನ್ನತ ಅಂಕ ಗಳಿಸಿದ, ಎಸ್. ಎಸ್. ಎಲ್. ಸಿ ಶೇ. 90ಹೆಚ್ಚು ಮತ್ತು ಪಿ.ಯು.ಸಿಯಲ್ಲಿ ಶೇ. 95ಹೆಚ್ಚು ಅಂಕ ಗಳಿಸಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. 5 ಗ್ರಾಮಗಳ ಪ್ರಗತಿಪರ ಕೃಷಿಕರಾದ ಮರೋಡಿ ಜಯರಾಜ್ ಕಾಬೇರ, ಪೆರಾಡಿ ಗ್ರಾಮ ಲೀಲಾ ಭಂಡಾರಿ, ಕಾಶಿಪಟ್ಣ ಎಮಿಲ್ಡ ಮೇರಿ ಪಿಂಟೊ, ಹೊಸಂಗಡಿ ಗ್ರಾಮ ಶೀತಲ್ ಶೆಟ್ಟಿ,ಬಡಕೋಡಿ ಗ್ರಾಮ ಶುಭಾನಂದ ಉತ್ತಮ ಕೃಷಿಕರಿಗೆ ಸನ್ಮಾನ, ಪೆರಾಡಿ ಕೃಷಿ ಪತ್ತಿನ ಸರಕಾರಿ ಸಂಘದ ವ್ಯಾಪ್ತಿಯ ಶಾಲೆಗೆ ಶೇ. 100ಫಲಿತಾಂಶ ಪಡೆದ ಶಾಲೆಗಳಿಗೆ ಸನ್ಮಾನ, ಸಂಘದ ಸದಸ್ಯರು ಮೃತ ಪಟ್ಟ ಕುಟುಂಬಕ್ಕೆ ಆರ್ಥಿಕ ನೆರವು ಮತ್ತು ವಿಕಲ ಚೇತನರಿಗೆ ಆರ್ಥಿಕ ನೆರವು ನೀಡಲಾಯಿತು.ನಿರ್ದೇಶಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ ವರದಿ ಮಂಡಿಸಿದರು.