Site icon Suddi Belthangady

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

ಗುರುವಾಯನ ಕೆರೆ: ಆ. 9ರಂದು ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಗುರುವಾಯನಕೆರೆ ನಮ್ಮ ಮನೆ ಶಾಖೆ ಮತ್ತು ಪಾಂಡುರಂಗ ಶಾಖೆಯ ಯೋಗ ಬಂಧುಗಳು ಸೇರಿ ಆ. 9ರಂದು ಪಾಂಡುರಂಗ ನಾಗರಿಕ ಸೇವಾ ಪ್ರತಿಷ್ಠಾನದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿದರು.

ನಮ್ಮ ಮನೆ ಶಾಖೆಯ ಶಿಕ್ಷಕ ಶಿವಕುಮಾರ್ ಅಣ್ಣ – ತಂಗಿಯರ ಬಾಂಧವ್ಯವನ್ನು ಪೌರಾಣಿಕವಾಗಿ ನಡೆದ ಘಟನೆಗಳ ಕಥೆಗಳ ಮೂಲಕ ಸ ವಿಸ್ತಾರ ವಾಗಿ ತಿಳಿಸುವುದರೊಂದಿಗೆ ರಕ್ಷಾಬಂಧನದ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿ ಎಲ್ಲಾ ಅಣ್ಣ ಅಕ್ಕಂದಿರಿಗೆ ರಕ್ಷಾಬಂಧನದ ಶುಭಾಶಯಗಳನ್ನು ಕೋರಿದರು. ಪಾಂಡುರಂಗ ಶಾಖೆಯ ಶಿಕ್ಷಕ ದಯಾನಂದ ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ಅಣ್ಣಂದಿರು ಹಾಗೂ ಅಕ್ಕಂದಿರು ಹರ್ಷೋಲ್ಲಾಸದಿಂದ ಪರಸ್ಪರ ರಕ್ಷಾಬಂಧನವನ್ನು ಕಟ್ಟುತ್ತಾ ಸಿಹಿ ತಿಂಡಿಯನ್ನು ಹಂಚುತ್ತಾ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು. ಎರಡು ಶಾಖೆಯಿಂದ ಸುಮಾರು 75 ಯೋಗ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version