ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಮೂಲಸ್ಥಾನದ ಅಭಿವೃದ್ಧಿಗಾಗಿ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಪಡೆದುಕೊಳ್ಳಲು ಮುಖ್ಯ ಅರ್ಚಕ ಶಿವಾನಂದ ಶಾಂತಿಯವರ ನೇತೃತ್ವದಲ್ಲಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಕ್ಷೇತ್ರ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಜಯಂತ ನಡುಬೈಲ್, ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಆಡಳಿತ ಸಮಿತಿಯ ಸದಸ್ಯ ಜಯವಿಕ್ರಮ ಕಲ್ಲಾಪು ಬೆಳ್ತಂಗಡಿ, ನಾಗೇಶ್ ಪೂಜಾರಿ ಮಂಗಳೂರು, ನಾರಾಯಣ ಪೂಜಾರಿ ಮಚ್ಚಿನ ಮುಂತಾದವರು ಆ. 3ರಂದು ಬೆಳಗ್ಗೆ ಕೇರಳ ರಾಜ್ಯದ ಶಿವಗಿರಿಗೆ ಭೇಟಿಕೊಟ್ಟು ಗುರುಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಶಿವಗಿರಿ ಯಾತ್ರೆಯಲ್ಲಿ ಗೆಜ್ಜೆಗಿರಿ ಕ್ಷೇತ್ರದ ಪ್ರಮುಖರು
