
ಬೆಳ್ತಂಗಡಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಶ್ರೇಷ್ಠ ಸದಸ್ಯರಾಗಿರುವ 2023ನೇ ಸಾಲಿನ ಉಪಾಧ್ಯಕ್ಷರಾಗಿ, ವಿವಿಧ ಕಾರ್ಯಕ್ರಮದಲ್ಲಿ ನಿರ್ದೇಶಕರಾಗಿ, 2024ನೇ ಸಾಲಿನ ಕಾರ್ಯದರ್ಶಿಯಾಗಿ, 2025ನೇ ಸಾಲಿನ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ಯುವ ನಾಯಕ – ಅಕ್ಷತ್ ರೈ ಅವರು ಗ್ರಾಮೀಣ ಪ್ರದೇಶದ ವ್ಯಾಪಾರ ಕ್ಷೇತ್ರದಲ್ಲಿ ತಾವು ದಾಖಲಿಸಿರುವ ವಿಶಿಷ್ಟ ಸಾಧನೆ, ಶ್ರದ್ಧೆ, ಶಿಸ್ತು ಹಾಗೂ ಸಮಾಜಮುಖಿ ಸೇವೆಗಾಗಿ ಜೆಸಿಐ ವಲಯ 15 (ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಳಗೊಂಡ ವಲಯ) ಆಯೋಜಿಸಿದ ವ್ಯವಹಾರ ಸಮ್ಮೇಳನ – 2025 ರ “ಮೃದಂಗ ಸಾಧಕ ಜೆಸಿಗಳ ಸಾಧನೆಯ ತರಂಗ” ಕಾರ್ಯಕ್ರಮದಲ್ಲಿ “ಸಾಧನಶ್ರೀ” ಪ್ರಶಸ್ತಿಗೆ ಭಾಜನರಾಗಿದ್ದಾರೆ.