Site icon Suddi Belthangady

ಧರ್ಮಸ್ಥಳ: ಹೆಣ ಹೂತಿಟ್ಟೆನೆಂದ ವ್ಯಕ್ತಿಯ ಪ್ರಕರಣ-ಎಸ್.ಐ.ಟಿ. ಅಧಿಕಾರಿಗಳ ಮುಂದೆ 8ಗಂಟೆಕಾಲ ಹೇಳಿಕೆ ನೀಡಿದ ಸಾಕ್ಷಿ ದೂರುದಾರ-ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ವಾಪಾಸ್

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಕೊಲೆ, ಅತ್ಯಾಚಾರ ನಡೆದ ಶವಗಳನ್ನು ಹೂತಿದ್ದೇನೆಂದು ಹೇಳಿರುವ ಸಾಕ್ಷಿ ದೂರುದಾರ ಜು.26ರಂದು ಮಂಗಳೂರಿನಲ್ಲಿ ಎಸ್. ಐ. ಟಿ ಅಧಿಕಾರಿ ಡಿಐಜಿ ಎಂ.ಎನ್. ಅನುಚೇತ್ ಮುಂದೆ ಹಾಜರಾಗಿದ್ದು ನಿರಂತರ ಎಂಟು ಗಂಟೆಗಳ ಕಾಲ ತನ್ನ ಹೇಳಿಕೆಯನ್ನು ನೀಡಿದ್ದಾರೆ. ತನ್ನಲ್ಲಿರುವ ಪಿನ್ ಟು ಪಿನ್ ಮಾಹಿತಿಯನ್ನು ಎಸ್. ಐ. ಟಿ. ಮುಂದೆ ನೀಡಿರುವ ಮುಸುಕುಧಾರಿ ಸಾಕ್ಷಿ ದೂರುದಾರ ಹೇಳಿಕೆ ನೀಡಿದ ನಂತರ ತನ್ನ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ.

Exit mobile version