Site icon Suddi Belthangady

ಅರಸಿನಮಕ್ಕಿ: ಹಾಡ ಹಗಲೇ ಕಾಡು ಹಂದಿ ತಿವಿದು ಗಾಯ ಪ್ರಕರಣ: ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯಿಂದ ಭೇಟಿ ಸ್ಥಳ ಪರಿಶೀಲನೆ

ಅರಸಿನಮಕ್ಕಿ: ಉಡ್ಯೆರೆ ಸಮೀಪ ತೋಟದ ಕೆಲಸಕ್ಕೆoದು ರೆಖ್ಯ ಬೂಡು ನಿವಾಸಿ ಬಾಲಕೃಷ್ಣ ಬಂದಿದ್ದು ಸಂಜೆ 4ಗಂಟೆಗೆ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ವೇಳೆ ಕಾಡು ಹಂದಿಯೊಂದು ಅವರ ಮೇಲೆ ದಾಳಿ ನಡೆಸಿ ಸೊಂಟ, ಕೈ, ಕಾಲಿನ ಭಾಗವನ್ನು ತಿವಿದು ಗಾಯಗೊಳಿಸಿದ ಘಟನೆ ವರದಿಯಾಗಿತ್ತು. ಜು. 22ರಂದು ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ರಾಘವೇಂದ್ರ, ಪ್ರೊಬೆಷನರಿ ಎ.ಸಿ.ಎಫ್. ಹಸ್ತ ಶೆಟ್ಟಿ, ವಲಯಾರಣ್ಯಧಿಕಾರಿ ಸುನಿಲ್, ಇಲಾಖೆಯ ವಾಹನ ಚಾಲಕ ಕಿಶೋರ್ ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Exit mobile version