Site icon Suddi Belthangady

ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರು: ಸಚಿವರಿಗೆ ಅಭಿನಂದನೆ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಸರ್ಕಾರ ಮಂಜೂರುಗೊಳಿಸಿದ್ದು, ಶಾಲೆಯನ್ನು ಮಂಜೂರಾತಿಗೊಳಿಸುವಲ್ಲಿ ಸಂಪೂರ್ಣ ಸಹಕಾರ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯನ್ ಮಾಲಾಡಿ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೆಡಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ಕೆ.ಎಮ್. ನಾಗೇಶ್ ಕುಮಾರ್ ಗೌಡ, ಕಕ್ಕಿಂಜೆ ಎಂ.ಜೆ.ಎಂ. ಜುಮ್ಮಾ ಮಸೀದಿ ಉಪಾಧ್ಯಕ್ಷ ಇಲ್ಯಾಸ್ ಕಕ್ಕಿಂಜೆ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನ ಇಂಟಕ್ ಘಟಕದ ಅಧ್ಯಕ್ಷ ಬಿ. ಅಶ್ರಫ್ ನೆರಿಯ, ಕಕ್ಕಿಂಜೆ ಎಂ.ಜೆ.ಎಂ ಜುಮ್ಮಾ ಮಸೀದಿ ಗೌರವಾಧ್ಯಕ್ಷ ಕೆ.ಎ. ರಹಿಮಾನ್, ಕಕ್ಕಿಂಜೆ ಅಣಿಯೂರು ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಖಾದರ್ ಬೀಟಿಗೆ, ಪ್ರಮುಖರಾದ ಸಂಶುದ್ದೀನ್ ಬೀಟಿಗೆ, ಕಕ್ಕಿಂಜೆ ಅಣಿಯೂರು ಶಾಲಾ ಎಸ್.ಡಿ.ಎಂ.ಸಿ. ಸದಸ್ಯ ಹಕೀಂ ಜಿ.ಕೆ., ಪ್ರಮುಖರಾದ ರತ್ನಕರ ಪೂಜಾರಿ ಚಿಬಿದ್ರೆ, ಜೋಯಿ ಜೋಯಲ್ ಕಾಂಜಾಲ್ ಚಿಬಿದ್ರೆ ಉಪಸ್ಥಿತರಿದ್ದರು.

Exit mobile version