Site icon Suddi Belthangady

ಉಜಿರೆಯಲ್ಲಿ ಸಾತ್ವಿಕ್ ಎಂಟರ್ ಪ್ರೈಸಸ್ ಶುಭಾರಂಭ


ಉಜಿರೆ: ಕಾಲೇಜು ರಸ್ತೆಯ ಓಷಿಯನ್ ಪರ್ಲ್ ಹೋಟೆಲ್ ಎದುರಿಗೆ (ರೈತ ಮಿತ್ರ ಕೇಂದ್ರ ) ಸಾತ್ವಿಕ್ ಎಂಟರ್ ಪ್ರೈಸಸ್ ಜು. 7ರಂದು ಶುಭಾರಂಭಗೊಂಡಿದೆ.

ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ರಿಬ್ಬನ್ ಕತ್ತರಿ ದೀಪ ಬೆಳಗಿಸಿ ಶುಭ ಹಾರೈಸಿದರು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಡಾ.ಕೆ.ಎನ್.
ಶೆನೈ ದಂಪತಿ, ಮಹಾ ಲಕ್ಷ್ಮಿ ಫ್ಯಾನ್ಸಿಯ ಭರತ್ ಕುಮಾರ್, ಯಶೋಧರ ಗೌಡ, ಕಟ್ಟಡ ಮಾಲಕ ವಾಸುದೇವ ಭಟ್, ಮಹಾಬಲೇಶ್ವರ, ಕಲ್ಪನಾ, ಪತ್ರ ಕರ್ತ ಶ್ರೀನಿವಾಸ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

ಮಾಲಕ ದಯಾನಂದ, ಪಲ್ಲವಿ, ಸಾತ್ವಿಕ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.

Exit mobile version