Site icon Suddi Belthangady

ಸೇವಾ ನಿವೃತ್ತಿ ಹೊಂದಿದ ಬೂಡುಜಾಲು ಶಾಲಾ ಶಿಕ್ಷಕಿ ಉಷಾ ಕುಮಾರಿಗೆ ಗೌರವ ಸನ್ಮಾನ

ನಿಡ್ಲೆ: ಬೂಡುಜಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 30 ವರ್ಷ ಕರ್ತವ್ಯ ನಿರ್ವಹಿಸಿದ ಶಿಕ್ಷಕಿ ಉಷಾ ಕುಮಾರಿ ಅವರನ್ನು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಹಾಗೂ ಊರವರ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಳ್ತಂಗಡಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಉಷಾ ಕುಮಾರಿ ಅವರು ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಾನು ಶಿಕ್ಷಕ ವೃತ್ತಿಗೆ ಬರಲು ಕಾರಣಕರ್ತರಾದ ನನ್ನ ತಾಯಿ ಮತ್ತು ಗುರುಗಳಾದ ರಘುನಾಥ ರೈ ಕುತ್ಯಾಳ ಅವರನ್ನು ಸ್ಮರಿಸಿದರು. ವೇದಿಕೆಯಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾಚಾರ್, ಉಪಾಧ್ಯಕ್ಷ ಐರಿನ್ ಡಿಸೋಜಾ ಹಾಗೂ ಜ್ಯೋತಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರತಿಮಾ ಶೆಟ್ಟಿ, ಅವರು ಶಿಕ್ಷಕಿಯ ಕರ್ತವ್ಯ ನಿಷ್ಠೆಯ ಬಗ್ಗೆ ಮಾತನಾಡಿದರು. ಶಿಕ್ಷಕಿ ಪ್ರಫುಲ್ಲ ಅವರು ಶಿಕ್ಷಕಿ ಉಷಾ ಅವರ ಬಗ್ಗೆ ತಾವೇ ರಚಿಸಿದ ಕವನ ವಾಚಿಸಿ, ಉತ್ತಮ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ನಿಮ್ಮ ಮುಂದಿನ ಜೀವನ ಸುಖಮಯವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಗೌರವ ಶಿಕ್ಷಕಿ ರಾಧಿಕಾ, ಪ್ರಫುಲ್ಲ ನಿವೃತ್ತ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಮರಿಯಪ್ಪ ಗೌಡ, ಶಿಕ್ಷಕಿ ಪ್ರತಿಮಾ ಶೆಟ್ಟಿ ಹಾಗೂ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ, ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ಪೂವಣಿ ಗೌಡ, ಅಡುಗೆ ಸಿಬ್ಬಂದಿಗಳಾದ ರತ್ನ ಮತ್ತು ಸುಮತಿ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಬಟ್ಟಲು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಉಷಾ ಶೆಟ್ಟಿ ಪತಿ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಮತ್ತು ಪುತ್ರರಾದ ಉದ್ಯಮಿ ಅವಿನಾಶ್ ಶೆಟ್ಟಿ ಹಾಗೂ ಕ್ಯಾಂಪ್ಕೊ ನೌಕರ ಆದರ್ಶ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾಚರು ಸ್ವಾಗತಿಸಿದರು. ಜ್ಯೋತಿ ವಂದಿಸಿದರು.

Exit mobile version