ಬೆಳ್ತಂಗಡಿ : ಕಟ್ಟಡ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವದಿಂದ ಕಾರ್ಮಿಕರಿಗೆ ಕೆಲಸ ಲಭಿಸದಿರುವ ಕುರಿತು ಹಾಗೂ ಹೊರರಾಜ್ಯದ ಕಾರ್ಮಿಕರನ್ನು ನೋಂದಣಿಗೊಳಿಸುವಂತೆ ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದಿಂದ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೋಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.
ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗೆ ಕೆಂಪುಕಲ್ಲು ಮತ್ತು ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವು ಲಭಿಸುತ್ತಿಲ್ಲ ಸಾಮಗ್ರಿಗಳ ಪೂರೈಕೆ ಮತ್ತು ಸಾಗಾಟದ ವಿಷಯದಲ್ಲಿ ಅಧಿಕಾರಿಗಳು ಜಿಲ್ಲೆಗೆ ಅನೇಕ ಹೊಸ ನೀತಿ ನಿಯಮಗಳನ್ನು ಜಾರಿ ಮಾಡಿ ಇದರಿಂದ ಕಟ್ಟಡ ನಿರ್ಮಾಣಕ್ಕಾಗಿ ಬೇಕಾಗುವ ಸಾಮಗ್ರಿಗಳು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಕಾರ್ಮಿಕರು ವಿವಿಧ ರೀತಿಯ ಸಾಲಗಳನ್ನು ಮಾಡಿಕೊಂಡು ಅದಕ್ಕೆ ಕಂತುಗಳನ್ನು ಕಟ್ಟುವ ಜವಾಬ್ದಾರಿಯನ್ನು ಹೊಂದಿರುವುದು ಇದರಿಂದ ಕಾರ್ಮಿಕರು ಭಾರಿ ರೀತಿಯ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಅಲ್ಲದೆ ಇದು ಶಾಲಾ ಆರಂಭದ ದಿನಗಳಾಗಿದ್ದರಿಂದ ಕಾರ್ಮಿಕರ ಮಕ್ಕಳ ಶಾಲಾ
ಶೈಕ್ಷಣಿಕ ಖರ್ಚಿಗಾಗಿ ಹೆಚ್ಚಿನ ರೀತಿಯ ಹಣವು ಕಾರ್ಮಿಕರಿಗೆ ಅವಶ್ಯಕತೆ ಇರುವುದರಿಂದ ಈ ಸಂದರ್ಭ ಕಾರ್ಮಿಕರ ಜೀವನಕ್ಕೆ ನಿರ್ಧಾರಗಳಿಂದ ಬಾರಿ ಪ್ರಮಾಣದ ತೊಂದರೆಗಳಾಗಿದೆ ಈ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಕೋರಿಕೆ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಹೊರರಾಜ್ಯದ ಕಾರ್ಮಿಕರು ತಾಲೂಕಿನ ಅತ್ಯಂತ ಕೆಲಸವನ್ನು ನಿರ್ವಹಿಸುತ್ತಿದ್ದು ನಮ್ಮ ತಾಲೂಕಿನಲ್ಲಿ ಕೆಲಸ ನಿರ್ವಹಿಸುವ ಹೊರರಾಜ್ಯದ ಕಾರ್ಮಿಕರ ನೋಂದಣಿಯನ್ನು ಮಾಡಿಕೊಳ್ಳಲುವಂತೆ ಮನವಿ ಮೂಲಕ ತಿಳಿಸಿದ್ದಾರೆ.
ಭಾರತೀಯ ಮದ್ದೂರು ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಯು., ಬಿ.ಎಂ.ಎಸ್ ಪ್ರಧಾನ ರಾಜ್ಯ ಕಾರ್ಯದರ್ಶಿ ಜಯರಾಜ್ ಕೆ. ಸಾಲಿಯಾನ್, ಬಿ.ಎಂ.ಎಸ್. ತಾಲೂಕು ಅಧ್ಯಕ್ಷ ಉದಯ ಪಿ.ಕೆ. ಬಂದಾರು, ಬಿ.ಎಂ.ಎಸ್. ಉಪಾಧ್ಯಕ್ಷ ಗಣೇಶ್ ಖರ್ಗೆ, ಉದಯ್ ಆಚಾರ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.