ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಯಕ್ಷಗಾನ ತರಗತಿ “ಯಕ್ಷ ಭಾರತೀ” ಇದರ ಉದ್ಘಾಟನಾ ಸಮಾರಂಭ ಜೂ. 28ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಶಿಕ್ಷಕರಿಂದ ಪ್ರಾರ್ಥನೆ ನೆರವೇರಿದ ಬಳಿಕ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ರಾಘವ ಎಸ್. ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ದಿವಾಕರ ಆಚಾರ್ಯ ಅವರು ಮಾತನಾಡಿ ಯಕ್ಷಗಾನದ ಬಗ್ಗೆ ವಿಶೇಷ ಮಾಹಿತಿ ವಿದ್ಯಾರ್ಥಿಗಳಿಗೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ದಿಗ್ಧರ್ಶಕ ಮಾಯಿಲ್ತೊಡಿ ಈಶ್ವರ ಭಟ್ ವಹಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸೇವಾ ಸಮಿತಿಯ ಅಧ್ಯಕ್ಷೆ ಚಂದ್ರಿಕಾ ಭಟ್, ಸದಸ್ಯರಾದ ಶಂಕರ ನಾರಾಯಣ ಭಟ್ ಸಾಮೇಗುಳಿ, ಯಕ್ಷಗಾನ ಶಿಕ್ಷಕ ದೇವಿಪ್ರಸಾದ್ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯ ವೃಂದ ಉಪಸ್ಥಿತರಿದ್ದರು. ಹಾಗೂ ವೇದಿಕೆ ಮುಂಭಾಗದಲ್ಲಿ ಪೋಷಕ ವೃಂದ, ಶಿಕ್ಷಕ ವೃಂದ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಗಮಿಸಿದ ಅಥಿತಿ ಗಣ್ಯರನ್ನು, ಪೋಷಕ ವೃಂದವನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ.ಆರ್. ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು. ಸಹ ಶಿಕ್ಷಕ ಮಂಜು ಗಣೇಶ್ ಧನ್ಯವಾದ ಅರ್ಪಿಸಿದರು.