Site icon Suddi Belthangady

ಧರ್ಮಸ್ಥಳ ಸಹಕಾರ ಸಂಘದಲ್ಲಿ ಬೆಳಗೋಣ ಸಂಸ್ಕಾರ ದೀಪ ಕಾರ್ಯಕ್ರಮ: ಸಂಘದ ವ್ಯಾಪ್ತಿಯ ನಿವೃತ್ತ ಶಿಕ್ಷಕರಿಗೆ ಗೌರವ

ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಸಂಘದ ವ್ಯಾಪ್ತಿಯ ಧರ್ಮಸ್ಥಳ ಹಾಗೂ ಪುದುವೆಟ್ಟು ಗ್ರಾಮದ ಎಲ್ಲಾ ನಿವೃತ್ತ ಶಿಕ್ಷಕರ ಗೌರವ ಉಪಸ್ಥಿತಿಯೊಂದಿಗೆ ಬೆಳಗೋಣ ಸಂಸ್ಕಾರ ದೀಪ ಕಾರ್ಯಕ್ರಮ ಜೂ. 28ರಂದು ಸಂಘದ ಅಟಲ್ ಜಿ ಸಭಾ ಭವನದಲ್ಲಿ ನಡೆಯಿತು. ಎನ್. ಆರ್. ದಾಮೋದರ ಶರ್ಮ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಸಂಘದ ಅಧ್ಯಕ್ಷ ಪ್ರೀತಮ್ ಡಿ.ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರಾದ ವಸಂತ ಭಟ್, ರತ್ನಾವತಿ ಡಿ., ಧರ್ಣಪ್ಪ ಡಿ., ವಸಂತಿ ಎಂ., ಕೃಷ್ಣ ಪ್ಪ ಪೂಜಾರಿ, ಲೀಲಾ, ಗಿರಿಜಾ ಕುಮಾರಿ, ಚಂದ್ರಿಕಾ ಎಂ., ಶ್ರೀಧರ ನಾಯರ್, ಬೇಬಿ ಡಿ., ಯದುಪತಿ ಗೌಡ, ರಾಘವ ಹೆಬ್ಬಾರ್ ಎಂ. ಚಿನ್ನಯ್ಯ ಗೌಡ, ರೋಹಿಣಿ, ರತ್ನಾವತಿ ಬಂಗಾಡಿ, ಸುನಂದ ಅವರನ್ನು ಗೌರವಿಸಲಾಯಿತು.

ವಿಠ್ಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು. ಶ್ರೀನಿವಾಸ ರಾವ್ ಸ್ವಾಗತಿಸಿ ವಂದಿಸಿದರು.

Exit mobile version