ಉಜಿರೆ: ಮಾದಕ ದ್ರವ್ಯಗಳಿಗೆ ಬಲಿಯಾಗಿ ದೈಹಿಕ ಚಟುವಟಿಕೆ ಕಡಿಮೆ ಆಗುತ್ತಿರುವ ಹಿನ್ನೆಲೆ ವ್ಯಸನ ಮುಕ್ತ ಭಾರತ ರೂಪಿಸುವ ನಿಟ್ಟಿನಲ್ಲಿ ಉಜಿರೆಯ ವ್ಯಾಯಾಮ್ ಫಿಟ್ನೆಸ್ ಆಂಡ್ ಕ್ರಾಸ್ ಫಿಟ್ ನೇತೃತ್ವದಲ್ಲಿ ಜೂ.29ರಂದು ಉಜಿರೆ ರೈನೋಥಾನ್ 2025 ಸ್ಪರ್ಧೆಯು ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ರೊ| ಪ್ರವೀಣ್ ಗೊರೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳಗ್ಗೆ ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಆರಂಭವಾಗೊಂಡ ರೈನಥಾನ್ ಸ್ಪರ್ಧೆಯು ಉಜಿರೆಯಿಂದ ಧರ್ಮಸ್ಥಳ ರಸ್ತೆಯಿಂದ ಬೆಳಾಲು ಕ್ರಾಸ್, ನಿನ್ನಿಕಲ್ಲು, ಪೆರ್ಲ ರತ್ನ ಮಾನಸ ರಸ್ತೆಯಿಂದ ಸಾಗಿ ಒಟ್ಟು 5 ಕಿಮೀ ಓಟದ ಸ್ಪರ್ಧೆ ನಡೆಯಿತು. 16 ವರ್ಷ ಮೇಲ್ಪಟ್ಟವರಿಗೆ ಅವಕಾಶವಿದ್ದರೂ ಮಕ್ಕಳಿಗೂ ಕೂಡ ಮುಕ್ತವಾಗಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು.
ಉಜಿರೆಯ ದಿ ಏಶಿಯನ್ ಪರ್ಲ್ ಕಾಶಿ ಪ್ಯಾಲೇಸ್, ಬೆಳ್ತಂಗಡಿಯ ರೋಟರಿ ಕ್ಲಬ್, ಬೆಂಗಳೂರಿನ ಇಂದಿರಾನಗರದ ರೋಟರಿ ಕ್ಲಬ್, ಬದುಕು ಕಟ್ಟೋಣ ಸೇವಾ ಟ್ರಸ್ಟ್, ಬೆಳ್ತಂಗಡಿ ರಾಜಾ ರಾಂ ಏಜೆನ್ಸೀಸ್, ಉಜಿರೆಯ ಎಸ್. ಡಿ. ಎಂ. ಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಂಧ್ಯಾ ಫ್ರೆಶ್, ಎಂ. ಡಬ್ಲ್ಯು. ಬಿ. ಗ್ರೂಪ್, ಪುತ್ತೂರಿನ ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಬೆಳ್ತಂಗಡಿ ಪ್ರೆಸ್ ಕ್ಲಬ್, ಮಂಗಳೂರು ಸಿ.ಇ.ಎನ್. ಪೊಲೀಸ್ ಠಾಣೆ ಇವರ ಸಹಯೋಗದಲ್ಲಿ ಜರಗಿತು.
ನೊಂದಾವಣೆ ಮಾಡಿ ಕೊನೆಯವರೆಗೆ ಇದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ವರ್ಧಾನುಗಳಿಗೆ ಬಹುಮಾನವನ್ನು ವಿತರಿಸಲಾಯಿತು. 50 ವರ್ಷ ಮೇಲ್ಪಟ್ಟು ಭಾಗವಹಿಸಿದ ಎಲ್ಲಾ ಸ್ಪರ್ಧಾನುಗಳಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ಚಂದ್ರ ಎಸ್., ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಎಸ್.ಡಿ.ಎಂ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ ಎಂ, ಎಸ್. ಡಿ.ಎಂ ಕಾಲೇಜು ಪ್ರಾಂಶುಪಾಲ ವಿಶ್ವನಾಥ ಪಿ, ರೊ| ಪೂರನ್ ವರ್ಮ, ರೋಟರಿ ಕಾರ್ಯದರ್ಶಿ ರೊ| ಸಂದೇಶ್ ರಾವ್, ಉಜಿರೆ ವ್ಯಾಯಾಮ ಜಿಮ್ ಮಾಲಕ ಶಿಶಿರ್ ರಘುಚಂದ್ರ, ಬೆಳ್ತಂಗಡಿ ರಾಜಾರಾಮ್ ಏಜೆನ್ಸಿ ಮಾಲಕ ರಾಘ್ನೇಶ್ ಸಾಲಿಯಾನ್, ಉಜಿರೆ ದಿ. ಓಶನ್ ಪರ್ಲ್ ಜನರಲ್ ಮ್ಯಾನೇಜರ್ ಉಪೇಂದ್ರ ತಾನುಭಾಗ್, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಜನಾರ್ಧನ್, ಉಜಿರೆ ಸಂಧ್ಯಾ ಪ್ರೆಶ್ ಮಾಲಕ ರಾಜೇಶ್ ಪೈ, ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಬೆಳ್ತಂಗಡಿ ರೋಟರಿ ನಿಯೋಜಿತ ಕಾರ್ಯದರ್ಶಿ ರೊ| ಎಂ.ಎಂ.ದಯಾಕರ್, ಉಜಿರೆ ಗ್ರಾ.ಪಂ ಪಿ.ಡಿ.ಓ ಡಿ. ಪ್ರಕಾಶ್ ಶೆಟ್ಟಿ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಧನಂಜಯ್ ರಾವ್ ನಿರೂಪಿಸಿ, ವಂದಿಸಿದರು.