ಕಲ್ಮಂಜ: ಗ್ರಾಮದ ದೇವರಗುಡ್ಡೆ ಶ್ರೀ ಆದಿ ಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ 1008 ಮಹಾ ಮಂದಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ ದೂರದೃಷ್ಟಿ ಯೋಜನೆಯಂತೆ ಅವರ ನೇತೃತ್ವದಲ್ಲಿ ವಿವಿಧ ವಿವಿಧ ಸಂಘಟನೆ ಗಳ ಮೂಲಕ ತಪೋವನ ನಿರ್ಮಾಣಕ್ಕೆ ರುದ್ರಾಕ್ಷಿ, ಬಿಲ್ವೆಪತ್ರೆ, ಹಣ್ಣು ಹಂಪಲು ಗಿಡ ನೆಡುವ ಕಾರ್ಯಕ್ರಮ ಜೂ. 29 ರಂದು ನಡೆಯಿತು.
ಶ್ರೀ ದೇವಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ನಡೆದ ಬಳಿಕ ಗಿಡ ಗಳಿಗೆ ಪೂಜೆ ಮಾಡುವ ಮೂಲಕ ಸ್ವಾಮಿಜಿ ಚಾಲನೆ ನೀಡಿ ಬಳಿಕ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಮಾಡುವರೇ ನೂತನ ಸಮಿತಿ ರಚನೆ ಮಾಡಲಾಗಿದ್ದು ಸಮಿತಿಯ ಗೌರವಾಧ್ಯಕ್ಷ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಶುಭ ಹಾರೈಸಿದರು.
ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೇರಾಜೆ,
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ ಕುಮಾರ್, ಕೆಪಿಸಿಸಿ ಸದಸ್ಯ ಕೇಶವ ಪಿ. ಬೆಳಾಲು,
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ
ನಾಗೇಶ್ ಕುಮಾರ್ ಗೌಡ, ರಾಜ್ಯ ಮಹಿಳಾ ಕಾಂಗ್ರೆಸ್
ಪ್ರಧಾನ ಕಾರ್ಯದರ್ಶಿ ನಮಿತಾ ಕೆ. ಪೂಜಾರಿ,
ದೇವಲಿಂಗೇಶ್ವರ ಭಕ್ತ ಮಂಡಳಿ ಯ ಅಧ್ಯಕ್ಷ ವಿಶ್ವನಾಥ ಆರ್. ನಾಯಕ್, ಯುವವಾಹಿನಿ ರಿ. ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ ಗುರಿಪಳ್ಳ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್, ಸೌತಡ್ಕ ಶ್ರೀ ಮಹಾಗಣಪತಿ
ಕ್ಷೇತ್ರದ ವ್ಯವಸ್ಥಾ ಪನ ಸಮಿತಿ ಸದಸ್ಯೆ ಲೋಕೇಶ್ವರಿ ವಿನಯ ಚಂದ್ರ, ಬಂಗಾಡಿ ಸಹಕಾರ ಸಂಘದ ಮಾಜಿ ಅಧ್ಯಕ್ಷ
ಎನ್ ಲಕ್ಷ್ಮಣಗೌಡ ಇಂದಬೆಟ್ಟು, ಅರ್ಚಕ
ಅನಂತೇಶ್ ಚಡಗ, ಸುನಿಲ್ ಕನ್ಯಾಡಿ, ರವಿಕುಮಾರ್ ಭಟ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಊರವರು, ಉಪಸ್ಥಿತರಿದ್ದು, ದೇವಸ್ಥಾನದ ವಠಾರದಲ್ಲಿ ಗಿಡಗಳನ್ನು ನೆಟ್ಟರು. ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.