Site icon Suddi Belthangady

ಕೆದ್ದು ಸಮಸ್ಯೆಗೆ ಶಾಸಕ ಹರೀಶ್ ಪೂಂಜಾ ಅವರಿಂದ ಸ್ಪಂದನೆ: ಮಿರರ್ ಅಳವಡಿಕೆ

ಅಳದಂಗಡಿ: ಕೆದ್ದು ಜಂಕ್ಷನ್ ನಲ್ಲಿರುವ ಬಹಳ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ತಿರುವು ರಸ್ತೆಗೆ ಸೂಕ್ತ ವೇಗ ನಿಯಂತ್ರಕದ ಅತ್ಯಾವಶ್ಯಕ ಇದೆ. ಈ ರಸ್ತೆಯಲ್ಲಿ ಈ ಮೊದಲೇ ಕೆಲವು ಅಪಘಾತಗಳು ನಡೆದಿವೆ. ಹಾಗು ಪ್ರತೀದಿನ ಹಲವು ವಾಹನಗಳು ಕೂದಲೆಳೆಯ ಅಂತರದಲ್ಲಿ ಅಪಘಾತದಿಂದ ಪಾರಗುವುದನ್ನು ಕಾಣಸಿಗುತ್ತದೆ.

ಬೆಳ್ತಂಗಡಿ ಕಡೆಯಿಂದ ಅಳದಂಗಡಿ ಕಡೆಗೆ ಬರುವ ವಾಹನಗಳು ಅತೀ ವೇಗದಿಂದ ಬಂದು ಕೆದ್ದುವಿನ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡ ಅನೇಕ ನಿದರ್ಶನಗಳು ಇವೆ. ಇದು ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡುವ ರಸ್ತೆ ಆಗಿರುವುದರಿಂದ ಇಲ್ಲಿ ಪಾದಚಾರಿಗಳು ರಸ್ತೆ ದಾಟುವುದು ಕೂಡ ಬಹಳ ಕಷ್ಟ ಹಾಗೂ ಅಪಾಯಕಾರಿಯಾಗಿದೆ.

ಆಲಡ್ಕ ಮಿತ್ತರೋಡಿ ದಾಟಿ ಕೆದ್ದುಗೆ ತಲುಪುವುದಕ್ಕಿಂತ ಸ್ವಲ್ಪ ಮೊದಲು ನೇರ ರಸ್ತೆ ಇರುವುದರಿಂದ ಇಲ್ಲಿ ವಾಹನ ಚಾಲಕರು ಅತೀ ವೇಗದಿಂದ ಕೆದ್ದು ತಿರುವು ದಾಟಿ ಬರಲು ಕಾರಣ. ಇನ್ನು ಬೆಳ್ತಂಗಡಿ ಕಡೆಯಿಂದ ಬರುವ ರಸ್ತೆ ಪರಿಚಯ ಇರದ ಹೊರ ಊರಿನ ವಾಹನಗಳು ಶಿರ್ಲಾಲು ಸಂಪರ್ಕಿಸುವ ಕೆದ್ದು – ಶಿರ್ಲಾಲು ರಸ್ತೆಯನ್ನೇ ಮುಖ್ಯ ರಸ್ತೆ ಎಂದು ತಿಳಿದು ಅದೇ ವೇಗದ ಚಾಲನೆಯಲ್ಲಿಯೇ ಶಿರ್ಲಾಲು ರಸ್ತೆ ಕಡೆ ಚಲಾಯಿಸುತ್ತಾರೆ. ಈ ವೇಳೆಯಲ್ಲಿ ಎದುರಿನಿಂದ ಬರುವ ವಾಹನದ ಜೊತೆ ಅಪಘಾತ ನಡೆಯುವ ಅನೇಕ ನಿದರ್ಶನಗಳು ಕಣ್ಣ ಮುಂದಿದೆ. ಬಹುಶಃ ರಸ್ತೆ ಅಗಲೀಕರಣ ಆದ ನಂತರದಿಂದ ಈ ಸಮಸ್ಯೆ ಉದ್ಭವಿಸಿರೋದು. ಈ ಸಮಸ್ಯೆಗೆ ಸೂಕ್ತ ಪರಿಹಾರದ ಅಗತ್ಯವಿದೆ. ಸೂಕ್ತ ಸ್ಥಳದಲ್ಲಿ ಬ್ಯಾರಿಕೇಡ್ ಅಥವಾ ಸ್ಪೀಡ್ ಬ್ರೇಕರ್ ಹಾಗು Convex Mirror ( ಪೀನ ಕನ್ನಡಿ) ನಿಂದ ಇಲ್ಲಿನ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ಅಭಿಪ್ರಾಯ. ಈ ಬಗ್ಗೆ ಸಂಬಂಧಪಟ್ಟವರು ಸಮಸ್ಯೆಯ ಬಗ್ಗೆ ಗ್ರಾಮಹಿತದ ಉದ್ದೇಶದಿಂದ ಶೀಘ್ರ ಪರಿಹಾರ ಕಲ್ಪಿಸಲಿ ಎಂಬ ನಿರೀಕ್ಷೆಯಲ್ಲಿರುವಾಗಲೇ ಸಾರ್ವಜನಿಕ ಮನವಿಗೆ ಕೂಡಲೆ ಸ್ಪಂದಿಸಿ ಮಿರರ್ ಅಳವಡಿಸಿ ಸಾರ್ವಜನಿಕ ಪ್ರಸಾಂಸೆಗೆ ಪಾತ್ರರಾಗಿದ್ದಾರೆ.

Exit mobile version