Site icon Suddi Belthangady

ವಿದ್ಯುತ್ ಶಾಕ್ ನಿಂದ ಉಡ್ಯೆರೆ ಕೃಷ್ಣಪ್ಪ ಕುಲಾಲ್ ಮೃತ್ಯು

ಅರಸಿನಮಕ್ಕಿ: ಎಂಜಿರ ಸಮೀಪ ತೋಟವೊಂದರಲ್ಲಿ ಅಡಿಕೆಗೆ ಔಷದಿ ಸಿಂಪಡನೆ ಮಾಡುವ ವೇಳೆ ದೋಟಿ ಹೆಚ್.ಟಿ. ಲೈನ್ ಗೆ ತಾಗಿ ಮದ್ದು ಸಿಂಪಡನೆ ಮಾಡುತಿದ್ದ ಉಡ್ಯೆರೆ ಕೃಷ್ಣಪ್ಪ ಕುಲಾಲ್(49ವ) ಮೃತ ಪಟ್ಟಿದ್ದಾರೆ.

ಘಟನೆ ಸಂಭವಿಸಿದ ಕೂಡಲೇ ಕೃಷ್ಣಪ್ಪ ಅವರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಲಲಿತ, ಪುತ್ರ ಯತೀಶ್, ಪುತ್ರಿ ಶಿಲ್ಪಾ ಅವರನ್ನು ಅಗಲಿದ್ದಾರೆ.

Exit mobile version