ಗುಂಡೂರಿ: ಶಾಂತಿಗುಡ್ಡೆ ಎಂಬಲ್ಲಿ ಸುಭಾಷ್ ಪೂಜಾರಿ ಮನೆ ಬಳಿಯ ಗುಡ್ಡೆಯಲ್ಲಿ ಸೊಪ್ಪು ಕಡಿದು ತೆಂಗಿನ ಮರದ ಬುಡಕ್ಕೆ ತಂದು ಹಾಕುತ್ತಿದ್ದುದನ್ನು ಆಕ್ಷೇಪಿಸಿ ಆರೋಪಿಗಳಾದ ರಾಜು, ವಿನೋದ ಮತ್ತು ದೀಪಕ್ ಅವರು ಸುಭಾಷ್ ಪೂಜಾರಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಆರೋಪಿತರುಗಳ ಹಲ್ಲೆಯಿಂದ ಸುಭಾಷ್ ಪೂಜಾರಿ ಅವರಿಗೆ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಜೂ.27ರಂದು ಪ್ರಕರಣ ದಾಖಲಾಗಿದೆ.
ಗುಂಡೂರಿ: ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ:ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು
