Site icon Suddi Belthangady

ಬೆಳ್ತಂಗಡಿ: ಎಸ್.ಎಸ್.ಎಲ್.ಸಿ ಸಾಧಕರಾದ ಅರ್ಮಾನ್, ಪಂಚಮಿಗೆ ಸನ್ಮಾನ

ಬೆಳ್ತಂಗಡಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅರ್ಮಾನ್ (621) ಮತ್ತು ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪಂಚಮಿ (595) ಅವರನ್ನು ಪ್ರಪುಲ್ಲ ನಗರದ ನಿವಾಸಿಗಳು ಜೂ. 26ರಂದು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್ ಮತ್ತು ಪವೀನಾ ಲಾಯಿಲ ಹಾಗೂ ಸಂತೋಷ್ ಹೆಗ್ಡೆ ಮತ್ತು ಕುಸುಮಾ ಅವರ ಮನೆಯಲ್ಲಿ ಸನ್ಮಾನಿಸಿದರು.

ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಅಳದಂಗಡಿ, ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಸನ್ನಿ, ಉಪನ್ಯಾಸಕ ಗಣೇಶ್ ಭಟ್, ವಿಶ್ರಾಂತ ಪತ್ರಕರ್ತ ಪಿ.ಎಸ್. ಅಶೋಕ್, ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಮಂಜುನಾಥ್ ರೈ, ಕೊಯ್ಯೂರು ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಧಾಕೃಷ್ಣ, ಉಪನ್ಯಾಸಕ ಶಂಕರ್ ನಾರಾಯಣ, ನಿವೃತ್ತ ಟೆಲಿಕಾಂ ಉದ್ಯೋಗಿ ದಿನಕರ ಗೌಡ, ಹಾಸ್ಟೆಲ್ ವಾರ್ಡನ್ ಲೋಕೇಶ್, ಪಶುವೈದಕೀಯ ಪರಿವೀಕ್ಷಕ ಶ್ರೀಧರ್, ಮಾತೃಶ್ರೀ ಟೆಕ್ಸ್‌ಟೈಲ್ಸ್‌ನ ಪಾಲುದಾರ ಸುರೇಶ್, ಹೈವೇ ಇಂಜಿನಿಯರ್ ವೀರಭದ್ರ, ಪೂಂಜಾಶ್ರೀ ಪ್ರಿಂಟರ್ಸ್‌ನ ಸ್ವಾತಿ ಅತ್ಯುಕ್ತಿ, ಉಪನ್ಯಾಸಕಿ ಅಂಕಿತಾ ಪ್ರದೀಪ್, ಶಿಕ್ಷಕ ನಾರಾಯಣ ಗೌಡ, ಶಿಕ್ಷಕಿಯಾರಾದ ಕುಮುದಾ, ಅನ್ನಮ್ಮ, ಮಾಲಿನಿ, ಅಮಿತಾ ಮತ್ತು ಹೇಮಾ ಎಂ. ರೈ, ಜಯಂತಿ, ಸುಜಾತಾ, ಮಾನಸ ಉಪಸ್ಥಿತರಿದ್ದರು.

Exit mobile version