Site icon Suddi Belthangady

ಬಂಗಾಡಿ ರಸ್ತೆಯನ್ನು ಸುತ್ತುವರಿದ ಮಳೆಯ ನೀರು: ಸಮಸ್ಯೆ ಪರಿಹಾರ : ಸುದ್ದಿ ವರದಿ ಫಲಶ್ರುತಿ

ಬಂಗಾಡಿ: ಜೈನ ಬಸದಿ ಎದುರು ಜೂ.25ರಂದು ಸುರಿದ ಮಳೆಯಿಂದಾಗಿ ನೀರಿನಿಂದ ತುಂಬಿ ರಸ್ತೆ ಮಾಯವಾಗಿದೆ. ಇಲ್ಲಿ ಚರಂಡಿ ಸಣ್ಣದಿರುವುದರಿಂದ ಮಳೆ ಬಂದರೆ ನೀರೆಲ್ಲಾ ಚರಂಡಿ ಇಲ್ಲದೆ ಮಾರ್ಗದಲ್ಲಿಯೇ ಹರಿಯುತ್ತದೆ. ಈ ಪರಿಸರದಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಜೈನ ಬಸದಿ, ಸಿ.ಎ. ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಖಾಸಗಿ ಕ್ಲಿನಿಕ್ ಇದೆ. ನೀರು ತುಂಬಿ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಂಚರಿಸಲು ಸಾರ್ವಜನಿಕರಿಗೆ ವಿಶೇಷವಾಗಿ ಶಾಲಾ ಮಕ್ಕಳಿಗೆ ಕಷ್ಟವಾಗುತ್ತಿದೆ.

ಪ್ರತೀ ವರ್ಷ ಮಳೆ ಬಂದರೆ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಎಂದು ಸುದ್ದಿ ಬಿಡುಗಡೆ ವೆಬ್ ಸೈಟ್ ನಲ್ಲಿ ವರದಿ ಪ್ರಕಟಗೊಂಡಿತು. ಈ ಬಗ್ಗೆ ಎಚ್ಚೆತ್ತ ಬಂಗಾಡಿ ವ್ಯವಸಾಯಿಕ ಸಹಕಾರಿ ಸಂಘ ಹಾಗೂ ಬಂಗಾಡಿ ಜೈನ ಬಸದಿ ಹಾಗೂ ಸ್ಥಳೀಯ ಮನೆಯವರ ಸಹಕಾರದಿಂದ ಜೂ.27ರಂದು ಮೋರಿ ಅಳವಡಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದರು.

Exit mobile version