ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಧರ್ಮಸ್ಥಳ, ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ವತಿಯಿಂದ ಕರ್ನಾಟಕ ರಾಜ್ಯದಲ್ಲಿರುವ ‘ಶೌರ್ಯ’ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂಸೇವಕರಿಗೆ ಹಮ್ಮಿಕೊಳ್ಳಲಾಗುವ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಗೆ ಚಾಲನೆ ಜೂ. 27 ರಂದು ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಯಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಉದ್ಘಾಟನೆಯನ್ನು ಆಂದ್ರಪ್ರದೇಶ ಗುಂಟೂರು ಎನ್. ಡಿ.ಆರ್. ಎಫ್. ಟೀಮ್
ಕಮಾಂಡರ್ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ನೆರವೇರಿಸಿದರು. ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್. ಎಸ್. ಎಸ್. ಆಶಯ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ನಿರ್ವಾಹಣಾಧಿಕಾರಿ ವಿಜಯ ಪೂಜಾರ್, ಎನ್. ಡಿ. ಆರ್. ಎಫ್ ವಿನೋದ್ ಆರ್ಯರ್ ಉಪಸ್ಥಿತರಿದ್ದರು. ಯೋಜನಾಧಿಕಾರಿಗಳಾದ ಯಶೋಧರ ಕೆ., ಅಶೋಕ ಬಿ. ಯೋಜನೆಯ ಅಧಿಕಾರಿಗಳು, ಶೌರ್ಯ ತಂಡದ ಸ್ವಯಂ ಸೇವಕರು ಹಾಜರಿದ್ದರು. ಶೌರ್ಯ ತಂಡದ ಸಂಯೋಜಕ ಸಾಧಕ ಸ್ವಯಂ ಸೇವಕರಾದ ರವೀಂದ್ರ ಉಜಿರೆ, ಅವಿನಾಶ್ ಅರಸಿನಮಕ್ಕಿ, ದಿನೇಶ್ ಶೆಟ್ಟಿ ನಾರಾವಿ, ವಿಶ್ವನಾಥ ತೆಂಕಕರಂದೂರು, ವಸಂತಿ ನಡ, ಸವಿತಾ ಪಿರೇರಾ ಅವರನ್ನು ಮತ್ತು ಉತ್ತಮ ಘಟಕ ಗಳಾದ ಶಿಶಿಲ, ಅರಸಿನಮಕ್ಕಿ, ಮಡಂತ್ಯಾರು ತಂಡವನ್ನು ಗುರುತಿಸಿ ಗೌರವಿಸಲಾಯಿತು. ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪ್ಯಾಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.