Site icon Suddi Belthangady

ಶಿಶಿಲೇಶ್ವರ ದೇವಾಲಯದಲ್ಲಿ ಶ್ರಮದಾನದಿಂದ ಸ್ವಚ್ಛಗೊಳಿಸುತ್ತಿರುವ ರಿಕ್ಷಾ ಚಾಲಕರು ಮತ್ತು ಊರ ಭಕ್ತಾದಿಗಳು

ಶಿಶಿಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿಶಿಲೇಶ್ವರ ದೇವಸ್ಥಾನದ ತಡೆಗೋಡೆ ಜರಿದು ಹಾನಿಗೊಂಡಿದ್ದು, ದೇವಳದ ಹೊರಾಂಗಣ ಮತ್ತು ಒಳಾಂಗಣದಲ್ಲೂ ನೀರು ನುಗ್ಗಿ ಸಂಪೂರ್ಣ ಕೆಸರುಮಯವಾಗಿದ್ದು, ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ಅನಾನುಕೂಲ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ಮನಗಂಡ ರಿಕ್ಷಾ ಚಾಲಕರು, ಊರಿನ ಭಕ್ತಾದಿಗಳು ಜೂ.27ರಂದು ಶ್ರಮದಾನ ಮೂಲಕ ಸ್ವಚ್ಛಗೊಳಿಸಿದರು.

Exit mobile version