Site icon Suddi Belthangady

ಶಿಶಿಲೇಶ್ವರ ದೇಗುಲ ಸಮಿತಿ: ಆಯ್ಕೆಯಾದರೂ ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು!!

ಶಿಶಿಲ: ದೇವಳದ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ಸಭೆ ಜೂ.26ರಂದು ಆಡಳಿತಾಧಿಕಾರಿ ದಿನೇಶ್ ಎಂ. ಅವರ ಅಧ್ಯಕ್ಷತೆಯಲ್ಲಿ ದೇವಳದ ಆವರಣದಲ್ಲಿ ನಡೆದಿದೆ.

ಆದರೆ ವಿಚಿತ್ರ ಎಂದರೆ ಈ ಸಭೆಗೆ ದೇವಳದ ಪ್ರಧಾನ ಅರ್ಚಕ ಶ್ರೀರಾಮ ಕಾರಂತ್ ಮಾತ್ರ ಹಾಜರಾಗಿದ್ದು, ಬಿಟ್ಟರೆ ಸಮಿತಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದವರು ಸಭೆಯಿಂದ ದೂರ ಉಳಿದಿರುವುದು ಅಚ್ಚರಿಗೆ ಕಾರಣವಾಗಿದೆ.

ಚೆನ್ನಪ್ಪ ಬಿನ್ ಅಣ್ಣು ನಲ್ಕೆ, ವಿಮಲ, ಪ್ರೇಮ, ರಮೇಶ್ ಬಿನ್ ಬಾಲಣ್ಣ ಗೌಡ, ಸುಂದರ ಗೌಡ ಬಿನ್ ಸೋಮಣ್ಣ ಗೌಡ, ಕೆ. ಸುನಿಲ್ ಗೋಖಲೆ ಬಿನ್ ವೆಂಕಟೇಶ್ ಗೋಖಲೆ ಅವರು ಸಭೆಗೆ ಗೈರಾಗಿದ್ದಾರೆ.

ಹೀಗಾಗಿ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಮತ್ತು ಸಭೆಯ ಸಂಪೂರ್ಣ ವರದಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್, ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮದಾಯ ದತ್ತಿ ಇಲಾಖೆಗೆ ಸಲ್ಲಿಸುವುದಾಗಿ ಆಡಳಿತಾಧಿಕಾರಿ ದಿನೇಶ್ ಎಂ. ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

Exit mobile version