ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೊಕ್ಕಡ ವಲಯದ ಕೊಕ್ಕಡ ಕಾರ್ಯಕ್ಷೇತ್ರದ ಹಳ್ಳಿಂಗೇರಿ ಸ್ವರ್ಣಶ್ರೀ ಸಂಘದ ಸದಸ್ಯೆ ರೇವತಿ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ 30,000 ಮೊತ್ತದ ಮಂಜೂರಾತಿ ಪತ್ರವನ್ನು ಕೊಕ್ಕಡ ವಲಯ ಮೇಲ್ವಿಚಾರಕಿ ಭಾಗೀರಥಿ, ಒಕ್ಕೂಟದ ಅಧ್ಯಕ್ಷ ಉದಯ, ಉಪಾಧ್ಯಕ್ಷ ತೋಮಸ್, ನಿಕಟ ಪೂರ್ವ ಅಧ್ಯಕ್ಷ ಹೆರಲ್ಡ್ ಪ್ರಕಾಶ್, ಸೇವಾಪ್ರತಿನಿಧಿ ಅನಿತಾ ಅವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೇವತಿ ಅವರಿಗೆ ಆರ್ಥಿಕ ನೆರವು
