ಬೆಳ್ತಂಗಡಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧ ದಿನಾಚರಣೆಯ ಪ್ರಯುಕ್ತ ಜೂ.26ರಂದು ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪೊಲೀಸ್ ಠಾಣೆಗಳ ವತಿಯಿಂದ ಮಾದಕ ವಸ್ತು ವಿರೋಧ ಜಾಥಾವು ಬೆಳ್ತಂಗಡಿ ಪೇಟೆಯಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾಥಾದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ನಂತರ ಮಂಜುನಾಥ ಕಲಾಭವನವರೆಗೆ ಬೆಳ್ತಂಗಡಿಯಲ್ಲಿ ಕಾರ್ಯಕ್ರಮ ನಡೆಯಿತು.
ವೇಣೂರು ಪೊಲೀಸ್ ಠಾಣೆ ಉಪ ನಿರೀಕ್ಷಕ ಶೈಲ ಮುರುಗೋಡ್ ಸ್ವಾಗತಿಸಿ, ಸಮಾರಂಭದ ಉದ್ಘಾಟನೆಯನ್ನು ಡಾ.ವೇಣುಗೋಪಾಲ್ ಶರ್ಮ ನೆರವೇರಿಸಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಠಾಣಾ ನಿರೀಕ್ಷಿಕ ಬಿ.ಜಿ. ಸುಬ್ಬಾಪುರ್ ಮಠ ವಹಿಸಿದ್ದರು.
ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕೆ., ಬೆಳ್ತಂಗಡಿ ಸಂಚಾರ ಠಾಣೆ ಉಪ ನಿರೀಕ್ಷಕ ಅರ್ಜುನ್ ಹೊರಕೇರಿ, ನಿಂಗಪ್ಪ ಜಕ್ಕಣ್ಣವರ, ಉಪಸ್ಥಿತರಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆ ಉಪ ನಿರೀಕ್ಷಕ ಸಮರ್ಥ್ ಆರ್ ಗಾಣಿಗೇರ ಧನ್ಯವಾದವಿತ್ತರು.