ಅಳದಂಗಡಿ: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಹೆಚ್.ಪಿ.ಸಿ.ಎಲ್) ಕಂಪೆನಿಯ ಕೆ.ಎಸ್. ಎನರ್ಜಿ ಸ್ಟೇಷನ್ ಕೆದ್ದುವಿನಲ್ಲಿ ಜೂ.26ರಂದು ಶುಭಾರಂಭಗೊಂಡಿತು.
ನೂತನ ಪೆಟ್ರೋಲ್ ಪಂಪನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಅಳದಂಗಡಿ ಶ್ರೀ ಸತ್ಯದೇವತಾ ದೇವಸ್ಥಾನದ ಆಡಳಿತ ಟ್ರಸ್ಟಿ ಶಿವಪ್ರಸಾದ್ ಅಜಿಲ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ಅಳದಂಗಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಶೃಂಗೇರಿಯ ಪ್ರಗತಿಪರ ರುದ್ರಾಕ್ಷಿ ಕೃಷಿಕ ಶೃಂಗೇಶ್ವರ ರಾವ್, ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಅಳದಂಗಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಅಳದಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಶಾಲಿನಿ, ಸದಸ್ಯ ಕೃಷ್ಣಪ್ಪ ಬಿಕ್ಕಿರ, ಸ್ಕೈ ಲೈಟ್ ಎಲೆಕ್ಟ್ರಿಕಲ್ ಮಾಲಕ ಪ್ರಸನ್ನ ಹೆಗ್ಡೆ, ಜಗದೀಶ್ ರೈ, ಸ್ವರಾಜ್, ಸಚಿನ್, ಸ್ವಾತಿ, ಹೆಚ್.ಪಿ.ಸಿ.ಎಲ್ ಮಂಗಳೂರಿನ ಸೇಲ್ಸ್ ಆಫೀಸರ್ ಇಶಿತಾ ಗಾರ್ಗ್, ಉಪಸ್ಥಿತರಿದ್ದರು. ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮಾಲಕಿ ಕವಿತಾ ಸ್ವಾಗತಿಸಿ, ವಂದಿಸಿದರು.