Site icon Suddi Belthangady

ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ

ಕಳೆಂಜ: ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯು ಜೂ. 25ರಂದು ನಡೆಸುವುದಾಗಿ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುವುದಕ್ಕೆ ನಾಮಪತ್ರ ಸಲ್ಲಿಸಲು ಜೂ. 14ರಿಂದ 17ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ ಸಹಕಾರ ಭಾರತಿಯ 11ಅಭ್ಯರ್ಥಿಗಳ ನಾಮಪತ್ರಗಳು ಮಾತ್ರ ಸಲ್ಲಿಕೆಯಾದ್ದರಿಂದ ಇನ್ನುಳಿದ ಅನುಸೂಚಿತ ಜಾತಿ ಮೀಸಲು ಮತ್ತು ಅನುಸೂಚಿತ ಪಂಗಡ ಮೀಸಲು ಸ್ಥಾನಕ್ಕೆ ಅಭ್ಯರ್ಥಿಗಳು ಇಲ್ಲವಾದ್ದರಿಂದ ನಾಮಪತ್ರ ಸಲ್ಲಿಸಿದ 11ಜನಸಹಕಾರ ಭಾರತಿ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಜೂ. 27ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ.ವಿ. ನಡೆಸಿದ್ದು ಅವರ ಸಮ್ಮುಖದಲ್ಲೇ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರ್ಯದರ್ಶಿ ಸುಶಾಂತ್ ಸಹಕರಿಸಿದರು.

ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರು: ಹರೀಶ್ ರಾವ್ ಕಾಯಡ (ಸಾಮಾನ್ಯ), ಸುಂದರ ಪೂಜಾರಿ ನೆರೆಂಕಿ ಪಾಲ್ (ಹಿಂದುಳಿದ ವರ್ಗ ಎ ಪ್ರವರ್ಗ), ಸುಬ್ರಾಯ ಗೌಡ ಕೊಡಂಗೆ( ಸಾಮಾನ್ಯ), ಆನಂದ ಗೌಡ ಭಂಡಾರಿ ಮಜಲು( ಸಾಮಾನ್ಯ), ಮೋಹನ ಗೌಡ ಬದಿಮಾರ್ (ಹಿಂದುಳಿದ ವರ್ಗ ಬಿ ಪ್ರವರ್ಗ), ಶಶಿಕಲಾ ಧನಂಜಯ ಗೌಡ (ಸಾಮಾನ್ಯ), ಚಂದ್ರಶೇಖರ ಗೌಡ ಪಿಲ್ಯಡ್ಕ ( ಸಾಮಾನ್ಯ), ಭಾರತಿ ಧರ್ಣಪ್ಪ ಗೌಡ ವಳಂಬಲ( ಮಹಿಳಾ ಮೀಸಲಾತಿ), ನಾರಾಯಣ ಗೌಡ ಪಲ್ಲದಂಗಡಿ (ಸಾಮಾನ್ಯ), ರತ್ನಕರ ಗೌಡ ಗುತ್ತು (ಸಾಮಾನ್ಯ), ದೇವಕಿ ಪದ್ಮನಾಭ ಗೌಡ ಬೀಜದಡಿ (ಮಹಿಳಾ ಮೀಸಲು).

Exit mobile version