ಬೆಳ್ತಂಗಡಿ: ತಾಲೂಕು ತೋಟತ್ತಾಡಿ ಗ್ರಾಮದ ಪಾದೆ ಎಂಬಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಬೇಕೆಂದು ಪಾದೆ, ದೋರ್ತಡಿ, ಕೊಯಕ್ಕುರಿ ಮತ್ತು ಸುತ್ತಮುತ್ತಲಿನ ಆಸಕ್ತ ಹೈನುಗಾರರು ಸೇರಿ ತೋಟತ್ತಾಡಿ ಶಿಶು ಮಂದಿರದಲ್ಲಿ ಸಭೆ ನಡೆಸಲಾಯಿತು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರಿನ ನಿರ್ದೇಶಕ ಪ್ರಭಾಕರ್ ಎಚ್. ಆರಂಬೋಡಿ ಭಾಗವಹಿಸಿ ಸಂಘ ಸ್ಥಾಪನೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಉಪ ವ್ಯವಸ್ಥಾಪಕ ಸತೀಶ್ ರಾವ್, ಹಿರಿಯರಾದ ಕಮಲಾಕ್ಷ, ತೋಟತ್ತಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಊರಿನ ಅನೇಕ ಗಣ್ಯರು, ರೈತರು, ಉಪಸ್ಥಿತರಿದ್ದರು.