Site icon Suddi Belthangady

ಕನ್ಯಾಡಿ: ನಾಯಿ ಪ್ರೇಮಿ ಶಿವರಾಜ್ ಮತ್ತಿಲ ಆತ್ಮಹತ್ಯೆ

ಧರ್ಮಸ್ಥಳ: ಕನ್ಯಾಡಿಯ ಮತ್ತಿಲ ನಿವಾಸಿ ಕೂಲಿಯಾಳು ಶಿವರಾಜ್ ಮತ್ತಿಲ (33ವ) ಜೂ. 23ರಂದು ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ತನ್ನ ಬೈಕಿನಲ್ಲಿ ನಾಯಿಯೊಂದನ್ನು ಕೂರಿಸಿಕೊಂಡು ಸುತ್ತಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಮತ್ತಿಲದ ದಿ. ಐತ ಅವರ ಮಗನಾದ ಈತ ಟೋಯಿಂಗ್ ವಾಹನ, ಕೃಷಿ, ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ. ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲ ಯತ್ನ ಮಾಡಿರುವ ಬಗ್ಗೆಯೂ ಸ್ಥಳೀಯರು ಮಾಹಿತಿ ಒದಗಿಸಿದ್ದಾರೆ.

Exit mobile version