Site icon Suddi Belthangady

ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕೊಕ್ಕಡ ಗ್ರಾಮ ಪಂಚಾಯತ್ ಮುಂಬಾಗ ಬಿಜೆಪಿಯಿಂದ ಪ್ರತಿಭಟನೆ

ಕೊಕ್ಕಡ: ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕೊಕ್ಕಡ ಗ್ರಾಮ ಪಂಚಾಯತ್ ಮುಂಬಾಗ ಜೂ. 23ರಂದು ಪ್ರತಿಭಟನೆ ನಡೆಯಿತು.

9/11 ನಿವೇಶನಗಳ ಸಮಸ್ಯೆಗಳು, ಅಕ್ರಮ ಸಕ್ರಮ ಸಮಸ್ಯೆಗಳು, ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆ ಸಮಸ್ಯೆ ವೃದ್ಧಾಪ್ಯ ವೇತನ ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಸಮಸ್ಯೆ, ಬಿಪಿಎಲ್ ಕಾರ್ಡ್ ರದ್ದುಗೊಳಿಸಿದರ ಕುರಿತಾಗಿ ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಣೇಶ್ ಕೆ. ಹೊಸ್ತೋಟ ಮಾತನಾಡಿದರು.

ಪಕ್ಷದ ಹಿರಿಯ ಮುಖಂಡ ಕುಶಾಲಪ್ಪ ಗೌಡ ಪೂವಾಜೆ, ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಪೂವಾಜೆ, ಬೂತ್ ಅಧ್ಯಕ್ಷರಾದ ಕಿರಣ್ ಬಲ್ತಿಮಾರ್, ಲಿಂಗಪ್ಪ ಗೌಡ ಕಡೀರ, ಕಾರ್ಯದರ್ಶಿಗಳಾದ ರವಿ ಪುಡಿಕೆತ್ತೂರ್, ಶ್ರೀಧರ್ ಬಲಕ್ಕ, ಕಿಶೋರ್ ಪೋಯ್ಯೋಲೆ, ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಳಂಬಿಲ, ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ್ ಗೌಡ, ಮಂಡಲ ಕಾರ್ಯಕಾರಣಿ ಸದಸ್ಯೆ ಪವಿತ್ರ, ಮಂಡಲ ಎಸ್. ಟ ಮೋರ್ಚಾ, ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಪಂಚಾಯತ್ ಸದಸ್ಯರು, ಸಿ.ಎ ಬ್ಯಾಂಕ್ ನಿರ್ದೇಶಕರು, ಯುವಮೋರ್ಚ ತಾಲೂಕು ಸದಸ್ಯ ರಂಜು ಕೊಕ್ಕಡ, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಅವರ ಮೂಲಕ ರಾಜ್ಯಪಾಲರಿಗೆ ಪ್ರತಿಭಟನಾ ಮನವಿಯನ್ನು ಸಲ್ಲಿಸಲಾಯಿತು.

Exit mobile version