ನಿಡ್ಲೆ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಆತಿಥ್ಯದಲ್ಲಿ ಮೂರನೇ Zone Governing Board (ZGB) ಸಭೆ ಭರ್ಜರಿಯಾಗಿ ಜರುಗಿದ್ದು, ನಿಡ್ಲೆಯ ಆನಂದ್ ವೆಲ್ನೆಸ್ ಮತ್ತು ರೆಸಾರ್ಟ್ನಲ್ಲಿ ಸಂಘಟನೆಯ ಶ್ರೇಷ್ಠ ಮೌಲ್ಯಗಳು ಪ್ರತಿಧ್ವನಿಸಿದ ಒಂದು ಆದರ್ಶ ವೇದಿಕೆಯಾಗಿತ್ತು.
ಸಭೆಯ ಮುಖ್ಯ ಅತಿಥಿಯಾಗಿ ಜೆಸಿಐ ಪಿಪಿಪಿ ಅಶೋಕ್ ಚೂತರ್ (Past Zone President, Zone 15) ಅವರು ಉಪಸ್ಥಿತರಿದ್ದು ಸಭೆಯನ್ನು ಉದ್ಘಾಟಿಸಿ ಜೆಸಿಐ ZGB ಸಭೆಯ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜೆಸಿಐ ಸೆನೆಟ್ ಅಭಿಲಾಶ್ ಬಿ.ಎ. (Zone President, Zone 15) ವಹಿಸಿದ್ದರು. ಜೆಸಿಐ ಪಿಪಿಪಿ ಗಿರೀಶ್ (Immediate Past ZP), ವಲಯ15ರ ಕಾರ್ಯದರ್ಶಿ ಜೆ.ಇ.ಪಿ ರವಿಶಂಕರ್ ಪಟಾಲಿ, ಎಲ್ಲಾ ಪ್ರಾಂತ್ಯಗಳ ವಲಯ ಉಪಾಧ್ಯಕ್ಷರು, ವಲಯ ನಿರ್ದೇಶಕರು, ಸಂಯೋಜಕರು ಹಾಗೂ ZGB ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಘಟಕದ ಅಧ್ಯಕ್ಷೆ ಹೆಚ್.ಜಿ.ಎಫ್ ಶೋಬಾ ಪಿ. ಅವರು ಸಭೆಗೆ ಸ್ವಾಗತ ಭಾಷಣ ನೀಡಿ, “ZGB ಸಭೆ ನಮ್ಮ ಘಟಕದ ಒಂದು ಗರ್ವದ ಘಳಿಗೆ. ಇದು ಸಂಘಟನಾ ಉತ್ಸಾಹ, ಸಾಮೂಹಿಕ ಚಿಂತನೆ ಮತ್ತು ಮುಂದಿನ ದಾರಿದೀಪಗಳ ಚರ್ಚೆಗೆ ವೇದಿಕೆಯಾಗಲಿ” ಎಂದು ಹಾರೈಸಿದರು.
ಜೆಸಿ ರಿತೇಶ್ ಸ್ಟ್ರೆಲಾ ಮತ್ತು ಜೆಸಿ ಪ್ರಜ್ವಲ್ ಲೋಬೋ ಅವರು ಯೋಜನಾ ನಿರ್ದೇಶಕರಾಗಿ ಯಶಸ್ವಿಯಾಗಿ ನಿರ್ವಹಿಸಿದರು. ಜೆಸಿಐ ನಿಕಟಪೂರ್ವ ಅಧ್ಯಕ್ಷ ಜೆಸಿ ಸಂತೋಷ್ ಜೈನ್, ಕಾರ್ಯದರ್ಶಿ ಜೆಸಿ ಚಂದನ್ ಜೈನ್, ಲೇಡಿ ಜೆಸಿ ಅಧ್ಯಕ್ಷರು, ಯುವ ಜೆಸಿ ಅಧ್ಯಕ್ಷ ಜೆಜೆಸಿ ಶ್ರವಣ ಹಾಗೂ ಮಕ್ಕಳ ಜೆಸಿ ಅಧ್ಯಕ್ಷ ಜೆ.ಸಿ.ಎಲ್.ಟಿ ದಕ್ಷಾ ಜೈನ್, ಕೋಶಾಧಿಕಾರಿ ಜೆಸಿ ಪ್ರೀಯಾ ಜೆ. ಅಮಿನ್, ಪೂರ್ವಾಧ್ಯಕ್ಷ ಜೆ.ಎಫ್.ಎಮ್ ಶ್ರೀದರ್ ರಾವ್, ಮಾರ್ಗದರ್ಶಕ ಹೆಚ್.ಜಿ.ಎಫ್ ಜೋಸೆಪ್ ಪೀರೇರಾ, ಹೆಚ್.ಜಿ.ಎಫ್ ಜೇಸಿಂತಾ ಡಿಸೋಜಾ, ಹಿರಿಯ ಸದಸ್ಯರಾದ ಜೆಸಿ ಪಿ ಟಿ ಸಬಾಸ್ಟಿನ್, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗಂಭೀರತೆ ಹಾಗೂ ಗೌರವವನ್ನು ಹೆಚ್ಚಿಸಿದರು.
ಈ ಸಭೆಯಲ್ಲಿ ವಲಯದ ಪ್ರಮುಖ ನಿರ್ಣಯಗಳು ಕೈಗೊಳ್ಳಲ್ಪಟ್ಟಿದ್ದು, ಮುಂದಿನ ತಿಂಗಳುಗಳಲ್ಲಿ ಸಂಘಟನೆಯ ಬೆಳವಣಿಗೆಗೆ ದಿಕ್ಕು ನೀಡುವ ಮಹತ್ವದ ಚರ್ಚೆಗಳು ನಡೆದವು. ZGB ಸದಸ್ಯರು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಂಘಟನೆಯ ಉತ್ಕೃಷ್ಟತೆಗೆ ಬಲವರ್ಧನೆ ಮಾಡಿದರು.