ಶಿಬಾಜೆ: ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಶಿಬಾಜೆ ಗ್ರಾಮಪಂಚಾಯತ್ ಮುಂಬಾಗ ಜೂ. 23ರಂದು ಪ್ರತಿಭಟನೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಹಿರಿಯ ಬಿ ಜೆಪಿ ನಾಯಕರಾದ ರಾಘವೇಂದ್ರ ನಾಯಕ್ ಮಾತನಾಡಿ ನೈನ್ 11 ನಿವೇಶನಗಳ ಸಮಸ್ಯೆಗಳು, ಅಕ್ರಮ ಸಕ್ರಮ ಸಮಸ್ಯೆಗಳು, ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆ ಸಮಸ್ಯೆ ವೃದ್ಧಾಪ್ಯ ವೇತನ ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಸಮಸ್ಯೆ, ಬಿಪಿಎಲ್ ಕಾರ್ಡ್ ರದ್ದುಗೊಳಿಸಿದರ ಕುರಿತಾಗಿ ಮಾತನಾಡಿದರು.
ಶಿಬಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರತೀಶ್ ಬಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರ ಹರಾಜಕತೆಯನ್ನು ಸೃಷ್ಟಿ ಮಾಡಿದೆ, ಅಭಿವೃದ್ಧಿ ಮಾತುಗಳೇ ಕೇಳಿ ಬರುತ್ತಿಲ್ಲ ಎಲ್ಲಾ ಇಲಾಖೆಗಳು ಭ್ರಷ್ಟಚಾರದಿಂದ ಕೂಡಿದ್ದು ಜನ ಪರಿತಪಿಸುವಂತಾಗಿದೆ ಎಂದರು. ಪಂಚಾಯತ್ ಅಧ್ಯಕ್ಷೆ ರತ್ನಾ, ಉಪಾಧ್ಯಕ್ಷ ದಿನಕರ್ ಕುರುಪ್, ಸದಸ್ಯರಾದ ವಿನಯಚಂದ್ರ ಟಿ., ವನಿತಾ ಶೆಟ್ಟಿಗಾರ್, ಹಿರಿಯ ಮುಖಂಡರಾದ ಪುರಂದರ ಭಟ್, ಕೃಷ್ಣಪ್ಪ ಗೌಡ ಬಿ., ಕಾರ್ಯಕರ್ತರಾದ ರಾಧಾ ಕೃಷ್ಣ, ಸದಾಶಿವ, ಸಂತೋಷ್, ಇನ್ನೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.