Site icon Suddi Belthangady

ಗುರಿಪಳ್ಳ ನಿವಾಸಿ ಉಮೇಶ್ ಆಚಾರ್ಯರವರ ಶಸ್ತ್ರ ಚಿಕಿತ್ಸೆಯ ಆರ್ಥಿಕ ನೆರವಿಗಾಗಿ ಮನವಿ

ಉಜಿರೆ: ಖಾಸಗಿ ಸಂಸ್ಥೆ ಒ೦ದರಲ್ಲಿ ಕೆಲಸ ಮಾಡುತ್ತಿದ್ದ ಗುರಿಪಳ್ಳ ನಿವಾಸಿ ಉಮೇಶ್‌ ಆಚಾರ್ಯ ಅವರು Aneurysm ಎಂಬ ಗಂಭೀರ ತಲೆನೋವಿನ ಸಮಸ್ಯೆ ಎದುರಿಸಿದ್ದು ವೈದ್ಯರ ಸಲಹೆ ಮೇರೆಗೆ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇವರ ಮೂವರು ಹೆಣ್ಣು ಮಕ್ಕಳು ಇನ್ನೂ ಶಾಲೆಯಲ್ಲಿ ಕಲಿಯುತ್ತಿದ್ದು ಉಮೇಶ್ ಆಚಾರ್ಯರವರೇ ಮನೆಯ ಆಧಾರ ಸ್ತಂಭವಾಗಿದ್ದರು. ವೈದ್ಯರು ಚಿಕಿತ್ಸೆಗೆ ಅಂದಾಜು ಸರಿಸುಮಾರು 6 ಲಕ್ಷ ರೂಪಾಯಿ ಆಗಬಹುದು ಎ೦ದು ತಿಳಿಸಿದ್ದಾರೆ. ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಪಾವತಿಸಬೇಕಾದ 3 ಲಕ್ಷ ಹಣ ಹೊಂದಿಸಿದ್ದು, ಇನ್ನೂ 3 ಲಕ್ಷದ ಅವಶ್ಯಕತೆಯಿದ್ದು ದಾನಿಗಳ ಸಹಾಯವನ್ನು ಅಪೇಕ್ಷಿಸುತ್ತಿದ್ದಾರೆ. ಸಹೃದಯರು 8618149095 ಮೊಬೈಲ್ ನಂಬರಿಗೆ ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ಧನ ಸಹಾಯ ಮಾಡಿ ಶಸ್ತ್ರ ಚಿಕಿತ್ಸೆಯ ಆರ್ಥಿಕ ನೆರವಿಗಾಗಿ ವಿನಂತಿಸಿದ್ದಾರೆ.

Exit mobile version