
ಬಳ್ಳಮಂಜ ಮಚ್ಚಿನದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ “ಯಕ್ಷಧ್ರುವ -ಯಕ್ಷ ಶಿಕ್ಷಣ “ಯಕ್ಷಗಾನ ನಾಟ್ಯ ತರಗತಿಯು ಜೂ.21 ರಂದು ನಡೆಯಿತು. ಧರ್ಮಸ್ಥಳದ ಹಿರಿಯ ಯಕ್ಷಗಾನ ಸಂಘಟಕ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟಿ ಭುಜಬಲಿ ಕಾರ್ಯಕ್ರಮ ಉದ್ಘಾಟಿಸಿ ಪ್ರಸ್ತಾವಿಕವಾಗಿ ಮಾತಾಡಿದರು.
ಬೆಳ್ತಂಗಡಿ ಘಟಕದ ಪಟ್ಲ ಪೌಂಡೇಶನ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಲಾಯಿಲಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ, ಯಕ್ಷಶಿಕ್ಷಣದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಯಕ್ಷ ಶಿಕ್ಷಕ ದೇವಿಪ್ರಸಾದ್ ಗುರುವಾಯನಕೆರೆ, ಚಿತ್ರಕಲಾವಿದ ಪ್ರವೀಣ್ ಆಚಾರ್ಯ, ಕೇಶವ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಅಕ್ಷತಾ, ಸ್ವಾಗತಿಸಿದರು. ಶಿಕ್ಷಕ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು