Site icon Suddi Belthangady

ಮುಂಡ್ರುಪ್ಪಾಡಿ ಶಾಲೆಗೆ ಹರೀಶ್ ರಾವ್ ಮುಂಡ್ರುಪ್ಪಾಡಿ ನೆರವು: ರೂ.70 ಸಾವಿರ ಮೊತ್ತದ ಡೆಸ್ಕ್ ಗಳ ಹಸ್ತಾಂತರ

ಮುಂಡ್ರುಪ್ಪಾಡಿ : ಸ. ಕಿ. ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ, ಸೌತಡ್ಕ ದೇವಸ್ಥಾನ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ, ಕನ್ಯಾಡಿ ಅಯ್ಯಪ್ಪ ಮಂದಿರದ ಹಾಲಿ ಅಧ್ಯಕ್ಷ, ಸೇವಾಭಾರತಿ ಕನ್ಯಾಡಿಯ ಮಾಜಿ ಅಧ್ಯಕ್ಷ ಹಾಗೂ ಶಾಲಾ ಮಾರ್ಗದರ್ಶಕ ಹರೀಶ್ ರಾವ್ ಮುಂಡ್ರುಪ್ಪಾಡಿ ಅವರು ಶಾಲಾಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಸುಮಾರು ರೂ. 70,000/- ಮೌಲ್ಯದ 5 ಡೆಸ್ಕ್ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಶಾಖೆಯಲ್ಲಿ ಏರ್ಪಡಿಸಲಾಗಿದ್ದ ಈ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲೆಯಲ್ಲಿ 1968ನೇ ಸಾಲಿನಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀಧರ್ ರಾವ್ ಅವರು ಡೆಸ್ಕ್ ಗಳನ್ನು ಶಾಲಾ ಮುಖ್ಯ ಶಿಕ್ಷಕಿ ಚಿತ್ರಪ್ರಭಾ ಹಾಗೂ ಎಸ್. ಡಿ. ಎಂ. ಸಿ ಅವರಿಗೆ ಹಸ್ತಾಂತರಿಸಿದರು.

ಶ್ರೀಧರ್ ರಾವ್ ರವರು ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲು ರೂ 5000/- ಹಣವನ್ನು ಶಾಲೆಗೆ ದೇಣಿಗೆಯಾಗಿ ನೀಡಿದರು.

ಶಾಲಾ ಸ್ಥಾಪಕಾಧ್ಯಕ್ಷರ ಪುತ್ರ ನಾಗೇಶ್ ರಾವ್ ಮುಂಡ್ರುಪ್ಪಾಡಿ, ಕ್ಲಸ್ಟರ್ ನ ಸಿ.ಆರ್.ಪಿ ಪ್ರತಿಮಾ, ಹಿರಿಯ ವಿದ್ಯಾರ್ಥಿ ಮಧುಸೂಧನ್, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಡೆಸ್ಕ್ ಗಳನ್ನು ತಯಾರಿಸಿದ ಉದಯ್ ಆಚಾರ್ ಉಪಸ್ಥಿತರಿದ್ದರು.

Exit mobile version