Site icon Suddi Belthangady

ಹೊಕ್ಕಾಡಿ ಗೋಳಿ ಸ. ಉ. ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ವಿವಿಧ ಕೊಡುಗೆಗಳ ವಿತರಣೆ, ಅಭಿನಂದನಾ ಕಾರ್ಯಕ್ರಮ

ಆರಂಬೋಡಿ: ಸ. ಉ. ಪ್ರಾ. ಶಾಲೆ ಹೊಕ್ಕಾಡಿಗೋಳಿಯಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷ ದಿನೇಶ್ ಹುಲಿಮೇರು ಅವರ ಅಧ್ಯಕ್ಷತೆಯಲ್ಲಿ ದಾನಿಗಳಿಂದ ಜೂ. 21ರಂದು ಮಕ್ಕಳಿಗೆ ಕೊಡುಗೆಗಳನ್ನು ವಿತರಿಸಲಾಯಿತು.

EDRT ಸಂಸ್ಥೆಯಿಂದ ಮೀನಾಕ್ಷಿ ಮಾತಾಜಿ ಮತ್ತು ಹರೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ ಮತ್ತು ಕ್ರೀಡಾ ಸಾಮಗ್ರಿಗಳನ್ನು,
ಎಸ್. ಮಹಮ್ಮದ್, ಟೋಟಲ್ ಕ್ಲೀನ್ ಲಾಂಡ್ರಿ ಮಾಲೀಕರು, ಇವರಿಂದ ಟ್ರ್ಯಾಕ್ ಸೂಟ್, ಮನೋಜ್ ಐತೇರಿ, ಇವರಿಂದ ಉಚಿತ ನೋಟ್ ಪುಸ್ತಕ,
ನರೇಶ್ ಪೂಜಾರಿ, ಪ್ರಧಾನ ಅರ್ಚಕರು, ಶ್ರೀ ಕೊರಗಜ್ಜ ಕ್ಷೇತ್ರ, ದೇಲೋಡಿ, ಆರಂಬೋಡಿ ಇವರಿಂದ ಉಚಿತ ನೋಟ್ ಪುಸ್ತಕ, ಗ್ರಾಮ ಪಂಚಾಯತ್ ಸದಸ್ಯೆ ವಿಜಯ ಕುಂಜಾಡಿ ಅವರಿಂದ ಹೊಸದಾಗಿ ದಾಖಲಾದ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಉಚಿತ ನೋಟ್ ಪುಸ್ತಕ, ಜೂಲಿಯಾನ ಡಿಸೋಜ ಮಗ ಅಲ್ವಿನ್ ಡಿಸೋಜಾ ಅವರಿಂದ ಉಚಿತ ಛತ್ರಿ,
ಉದ್ಯಮಿ ಕಿರಣ್ ಮಂಜಿಲರಿಂದ ಗೌರವ ಶಿಕ್ಷಕರ ವೇತನ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಎರಡು ಫ್ಯಾನ್ ಕೊಡುಗೆಯಾಗಿ ನೀಡಿದರು.

ಕೊಡುಗೆ ನೀಡಿದ ಎಲ್ಲಾ ದಾನಿಗಳನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಸಂತೋಷ್ ಮಂಜಲ, ನಿತೇಶ್, ಶಾಲಾ ಎಸ್‌. ಡಿ. ಎಂ. ಸಿ. ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿಯರಾದ ಮೆಟಿಲ್ಡಾ, ಸಿಲ್ವಿಯ ಮಿರಾಂದ, ಸುತೀಕ್ಷ ದಾನಿಗಳ ಬಗ್ಗೆ ತಿಳಿಸಿದರು.

ಶಿಕ್ಷಕಿ ಸುಮಿತ್ರ ಸ್ವಾಗತಿಸಿ, ಶಾಲಾ ಶಿಕ್ಷಕಿ ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು. ಶುಭವತಿ ವಂದಿಸಿದರು.

Exit mobile version