ದಿಡುಪೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಜಕ್ಕೆ ಮಲವಂತಿಗೆ ವಿಶ್ವ ಯೋಗ ದಿನಾಚರಣೆ ಜೂ.21ರಂದು ನಡೆಸಲಾಯಿತು. ಯೋಗ ತರಬೇತಿದಾರರಾದ ಎನ್. ವೈ.ಕೆ ತಾ. ಪ್ರತಿನಿಧಿ ತೀಕ್ಷಿತ್ ಕೆ. ಕಲ್ಬೆಟ್ಟು ತರಬೇತಿ ನೀಡಿದರು.
ಮುಖ್ಯೋಪಾಧ್ಯಾಯ ಕುಮಾರ ಸ್ವಾಮಿ ಸ್ವಾಗತಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಶೇಖರ ಗೌಡ, ಅತಿಥಿಯಾಗಿ ಮಧುಸೂದನ್ ಹೆಗ್ಡೆ ಮಲ್ಲ,
ಸಹಾಯಕ ಶಿಕ್ಷಕರಾದ ರಂಗನಾಥ್, ಪರಮೇಶ್ವರ ನಾಯ್ಕ್, ಲೀಲಾವತಿ, ಚಂದ್ರಿಕಾ, ಸುಹಾಸಿನಿ ಹಾಗೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.