ಬೆಳ್ತಂಗಡಿ: ಕನ್ನಡ ಚಲನಚಿತ್ರರಂಗದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಎಲ್ಲರ ಮನೆ ಮನಗೆದ್ದ ಆರ್ಯವರ್ಧನ್ ಖ್ಯಾತಿಯ ಹಲವಾರು ಚಲನಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ ಅನಿರುದ್ಧ್ ಜೂ. 25ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ನೂತನ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಅನಿರುದ್ಧ್ ಅವರು ಈ ಹಿಂದೆಯೂ ಅಳದಂಗಡಿ ಅರಮನೆನಗರಿಯಲ್ಲಿ ನಡೆದ ಆಮಂತ್ರಣ ಹಬ್ಬದಲ್ಲಿ ಭಾಗವಹಿಸಿ ಆಮಂತ್ರಣ ಆವಾರ್ಡ್ ಪಡಕೊಂಡಿದ್ದು ಆಮಂತ್ರಣ ಪರಿವಾರದೊಂದಿಗೆ ನಿಕಟ ಸಂಪರ್ಕವಿದೆ.
ಆಮಂತ್ರಣ ಸೇವಾ ಪ್ರತಿಷ್ಠಾನದ ನೂತನ ಲಾಂಛನ ಬಿಡುಗಡೆ ಮಾಡಲಿರುವ ನಟ ಅನಿರುದ್ಧ್
