Site icon Suddi Belthangady

ಕರಂಬಾರು: ಸ.ಹಿ.ಪ್ರಾ. ಶಾಲೆಯಲ್ಲಿ ಪುಸ್ತಕ ವಿತರಣೆ

ಕರಂಬಾರು: ಸ.ಹಿ.ಪ್ರಾ. ಶಾಲೆಯಲ್ಲಿ ಜೂ. 19ರಂದು ಶಾಲೆಯ ಮಕ್ಕಳಿಗೆ ಬರೆಯುವ ಪುಸ್ತಕನ್ನು ಉಚಿತವಾಗಿ ನೀಡುತ್ತಿರುವ ಬೆಳ್ತಂಗಡಿಯ ನೋಟರಿ ವಕೀಲ ಮುರಳಿ ಬಿ.ಎನ್. ಬಲಿಪ ಮತ್ತು ಪತ್ನಿ ಮನೋರಮ, ಮಕ್ಕಳಾದ ಮಯೂರು ಮತ್ತು ಮಂದರಾ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಶುಭಹಾರೈಸಿದರು.

ಮುರಳಿ ಬಿ.ಎನ್. ಬಲಿಪರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯ್ ಕುಮಾರ್ ನಾವರ ಪಾಲ್ಗೊಂಡು ಶುಭಾಹಾರೈಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ಅಧ್ಯಕ್ಷತೆಯನ್ನು ವಹಿಸಿಕೊಂಡದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ರಮೇಶ್ ಛಾವಾಣ್, ಶಾಲಾಭಿವೃದ್ಧಿ ಸಮಿತಿಯ ಉಪಾದ್ಯಕ್ಷೆ ವಿಜಯ, ಸದಸ್ಯ ಅಶ್ವಥ್ ಸಾಲಿಯನ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಶಿಕ್ಷಕಿ ಸಾವಿತ್ರಿ ಸ್ವಾಗತಿಸಿದರು. ಪೆರೋಡಿತ್ತಾಯ ಕಟ್ಟೆ ಸಿ.ಆರ್.ಪಿ ಕಿರಣ್ ಕುಮಾರ್ ಕೆ.ಎಸ್. ನಿರೂಪಿಸಿದರು. ಶಿಕ್ಷಕಿಯರಾದ ಲತಾ, ಚೈತ್ರಾ, ಸ್ವಾತಿ ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಶಿಕ್ಷಕಿ ತಸ್ಮೀಯ ಧನ್ಯವಾದಗಳು ಸಲ್ಲಿಸಿದರು.

Exit mobile version