ಲಾಯಿಲ: ಜೂ.19ರಂದು ಗ್ರಾಮ ಪಂಚಾಯತ್ ನಿಂದ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಹಾನಿಯಾದ ಪ.ಜಾತಿ ಪ.ಪಂಗಡ ಫಲಾನುಭವಿಗಳ ಮನೆಗಳಿಗೆ ಟರ್ಪಲ್ ವಿತರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ, ಸದಸ್ಯರಾದ ಅರವಿಂದ ಕುಮಾರ್, ಮಹೇಶ್, ಪ್ರಸಾದ್ ಶೆಟ್ಟಿ, ದಿನೇಶ್ ಶೆಟ್ಟಿ, ಆಶಾ ಬೆನಡಿಕ್ಟ್ ಸಾಲ್ದಾನ, ರಜನಿ ಎಂ.ಆರ್., ಆಶಾಲತಾ, ಸವಿತಾ ಶೆಟ್ಟಿ, ಚಿದಾನಂದ ಶೆಟ್ಟಿ, ಹರೀಶ್ ಕುಲಾಲ್, ಹರಿಕೃಷ್ಣ, ರೇವತಿ, ಜಯಂತಿ, ಸಲೀಮ್ ಮರಿಯಮ್ಮ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ., ಕಾರ್ಯದರ್ಶಿ ತಾರಾನಾಥ ಕೆ., ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.