Site icon Suddi Belthangady

ಬೆಳ್ತಂಗಡಿಯಲ್ಲಿ ಎಸ್.ವೈ.ಎಸ್ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್

ಬೆಳ್ತಂಗಡಿ: ಜೂ. 15ರಂದು ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಸಮಿತಿಯಿಂದ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಎಫ್.ಎಮ್. ಗಾರ್ಡನ್ ಗುರುವಾಯನಕೆರೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದತ್ ಬಾ ಅಲವಿ ತಂಙಳ್ ಉಲ್ತೂರು ಉದ್ಘಾಟಿಸಿದರು.

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಬಹು ಅಬ್ದುಲ್ ರಹ್ಮಾನ್ ಸಖಾಫಿ ಆಲಂದಿಲ ಅಧ್ಯಕ್ಷತೆ ವಹಿಸಿದ್ದರು. ಆಧ್ಯಾತ್ಮಿಕ ನೇತ್ರತ್ವ ಹಾಗೂ ದುಆ ಮಜ್ಲಿಸ್ ಬಹು ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್ ಹಾದಿ ಮಲ್‌ಜಹ್ ನೇತೃತ್ವ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಬಹು ತ್ವಾಹಿರ್ ಸಖಾಫಿ ಉಸ್ತಾದ್ ಮಂಜೇರೀ ಕೇರಳ ಅವರು “ಸ್ಮಾರ್ಟ್ ಲೀಡರ್ಸ್” ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು. ಸಂಘಟನೆಯ ಜವಾಬ್ದಾರಿ ಎಂಬ ವಿಷಯದಲ್ಲಿ
ಎಸ್.ವೈ.ಎಸ್ ಈಸ್ಟ್ ಜಿಲ್ಲಾ ಅಧ್ಯಕ್ಷ ಬಹು ಅಶ್ರಫ್ ಸಖಾಫಿ ಮಾಡಾವು ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಯುನಿಟ್, ಸರ್ಕಲ್ ಪದಾಧಿಕಾರಿಗಳು ಹಾಗೂ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರೂ ಸರಿ ಸುಮಾರು 300ಕ್ಕೂ ಅಧಿಕ ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭಕ್ಕೆ ಬದ್ರ್ ಶುಅದಾಕಳ ಹೆಸರಲ್ಲಿ ಮೌಲೀದ್ ಪಾರಾಯಣ ನಡೆಯಿತು. ಝೋನ್ ಕೋಶಾಧಿಕಾರಿ ಬಹು ರಝಾಕ್ ಸಖಾಫಿ ಮಡಂತ್ಯಾರು ನೇತೃತ್ವ ವಹಿಸಿದ್ದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬದ್ರುದ್ದೀನ್ ಅಲ್ ಹಾದಿ ತಂಙಳ್ ಮದನಿ ಪೊಮ್ಮಾಜೆ, ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಬಹು ಹಂಝ ಮದನಿ ಉಸ್ತಾದ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಕೋಶಾಧಿಕಾರಿ ಶಾಫಿ ಸಖಾಫಿ ಪಟ್ಟೂರು ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯಾಧ್ಯಕ್ಷ ಉಮರ್ ಜಿ.ಕೆ., ಸಿದ್ದೀಕ್ ಜೆ.ಹೆಚ್., ವಕ್ಫ್ ಸಲಹಾ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆ, ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಡಿವಿಷನ್ ಅಧ್ಯಕ್ಷ ಇಸ್‌ಹಾಖ್ ಅಳದಂಗಡಿ, ಪ್ರದಾನ ಕಾರ್ಯದರ್ಶಿ ನಾಸಿರ್ ಪದ್ದಂಡಡ್ಕ ಭಾಗವಸಿದ್ದರು.

ಕಾರ್ಯಕ್ರಮವನ್ನು ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಪ್ರ.ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿದರು. ಝೋನ್ ಸಂಘಟನಾ ಕಾರ್ಯದರ್ಶಿ ಜಮಾಲುದ್ದೀನ್ ಲತೀಫೀ ಲಾಡಿ ಧನ್ಯವಾದವಿತ್ತರು.

Exit mobile version