Site icon Suddi Belthangady

ಆಮಂತ್ರಣ ವಿಜಯ ಕುಮಾರ್ ಜೈನ್ ರಿಗೆ ಸನ್ಮಾನ

ಕುದ್ಯಾಡಿ: ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದ್ಧರ್ಮ ಯುವಕ ಮಂಡಲದ ನೂತನ ಸಭಾಂಗಣ ಸದ್ಧರ್ಮ ಇದರ ಲೋಕಾರ್ಪಣಾ ಸಮಾರಂಭದಲ್ಲಿ ವಿಜಯ ಕುಮಾರ್ ಜೈನ್ ಅವರಿಗೆ ಸನ್ಮಾನ.

ಆಮಂತ್ರಣ ಪರಿವಾರದ ಸೇವೆಯನ್ನು ಹಾಗೂ ವೈಯುಕ್ತಿಕ ಸೇವೆಗಳನ್ನು ಗಮನಿಸಿ ಮತ್ತು ಸದ್ಧರ್ಮ ಯುವಕ ಮಂಡಲಕ್ಕೆ ನೀಡಿದ ಸಹಕಾರವನ್ನು ಗಮನಿಸಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು.

ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ನಿತ್ಯಾನಂದ ಎನ್. ಯೋಗಕ್ಷೇಮ ನಾವರ, ಪಾಕತಜ್ಞರಾದ ನಾಗಕುಮಾರ್ ಜೈನ್, ಪ್ರಗತಿಪರ ಕೃಷಿಕ ವಿಶ್ವನಾಥ ಕುದ್ಯಾಡಿ, ಯುವಕ ಮಂಡಲದ ಅಧ್ಯಕ್ಷ ಸದಾನಂದ ಬಿ.ಕುದ್ಯಾಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version