ಕೊಕ್ಕಡ: ಜೂ. 15ರಂದು ನಡೆದ ಜೆ.ಸಿ.ಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ವಠಾರದಲ್ಲಿ ನಡೆಯಿತು. ಘಟಕಕ್ಕೆ ಹೊಸ ಸದಸ್ಯರಾದ ಜೆ.ಸಿ ಅನಿಲ್ ಕಿರಣ್ ಮನ್ಕರೇನ್ಹಸ್ ಮತ್ತು ಜೆ.ಸಿ ಆಯುಷ್ ಜೈನ್ ಸೇರ್ಪಡೆಯಾದರು. ಹೊಸ ಸದಸ್ಯರಿಗೆ ಪ್ರಮಾಣ ವಚನ ಹೆಚ್. ಜಿ. ಎಫ್ ಜೋಸೆಫ್ ಪೆರೇರ ಬೋಧಿಸಿದರು. ಸಭೆಯಲ್ಲಿ ಮುಂದಿನ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
ಜೂ. 22ರಂದು ಆಯೋಜಿಸಿರುವ ZGB ( ZONE GOVERNING BOARD 2025 ZONE 15 JCI ) ಮೂರನೇ ವಲಯ ಆಡಳಿತ ಸಭೆ ZP, ZVPS, ZD ಸೇರಿ ಸುಮಾರು 40 ವಲಯ ಆಡಳಿತ ಮಂಡಳಿ ಸದಸ್ಯರು ಆತಿಥ್ಯ ವಹಿಸಲು ನಿಡ್ಲೆಯಲ್ಲಿರುವ ಆನಂದ ರೇ ಸಾರ್ಟ್ ನಲ್ಲಿ ಕಾರ್ಯಕ್ರಮ ನಡೆಸುದೆಂದು ತೀರ್ಮಾನಿಸಲಾಗಿದೆ. ಘಟಕದ ಅಧ್ಯಕ್ಷ ಡಾ. ಶೋಭಾ ಪಿ., ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಜೈನ್ ,ಕಾರ್ಯದರ್ಶಿ ಚಂದನ ಜೈನ್, ಮಹಿಳಾ ಅಧ್ಯಕ್ಷೆ ರೇಷ್ಮಾ ಅಲ್ಮೆಡ, ಕೆ. ಶ್ರೀಧರ್ ರಾವ್, ಪಿ.ಟಿ. ಸಬಾಸ್ಟಿನ್, ಅಕ್ಷತ್ ರೈ, ರಿತೇಶ್, ನಿತ್ಯಾನಂದ ರೈ, ಜಶ್ವಂತ ಪಿರೇರ, ಪ್ರಜ್ವಲ್ ಲೋಬೊ, ದೀಪಿಕಾ ಜೈನ್, ಆದ್ಯ ಜೈನ್, ಧನುಷ್, ದಕ್ಷ ಹಾಗೂ ಜೆಸಿ ಸದಸ್ಯರು ಉಪಸ್ಥಿತರಿದ್ದರು.