Site icon Suddi Belthangady

ಸವಣಾಲು: ಬೈಕ್ ಸಮೇತ ನೀರಿನಲ್ಲಿ‌ ಕೊಚ್ಚಿ ಹೋದ ಯುವಕರು-ಪವಾಡದ ರೀತಿ ಪಾರಾದ ಯುವಕರು

ಸವಣಾಲು: ಹಿತ್ತಿಲಪೇಲ ಕೂಡುಜಾಲು ಸಮೀಪದ ನದಿಯಲ್ಲಿ ಬೈಕ್ ಸಮೇತ ಯುವಕರಿಬ್ಬರು ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಜೂನ್ 15ರಂದು ನಡೆದ ಘಟನೆಯಲ್ಲಿ ಯುವಕರು ಪವಾಡದ ರೀತಿಯಲ್ಲಿ ಬದುಕಿ ಉಳಿದಿದ್ದಾರೆ.

ಸವಣಾಲು ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ನದಿಯನ್ನು ಬೈಕ್ ಸಮೇತ ದಾಟುವ ಸಾಹಸ ಮಾಡಿದಾಗ ನೀರಿನಲ್ಲಿ‌ಕೊಚ್ಚಿ ಹೋಗಿದ್ದಾರೆ.

ಅದೃಷ್ಟವಶಾತ್ ಬೈಕ್ ನದಿಯ ಬದಿಯಲ್ಲಿ ಸಿಲುಕಿದ್ದು, ಯುವಕರಿಬ್ಬರು ಯಾವುದೋ ಬಳ್ಳಿಯ ಸಹಾಯದಿಂದ ನದಿಯಿಂದ ಮೇಲೆ ಬಂದಿದ್ದಾರೆ. ಸ್ಥಳೀಯರ ಕಾರ್ಯಾಚರಣೆಯಲ್ಲಿ ಈಗ ಬೈಕ್ ಮೇಲಕ್ಕೆತ್ತುವ ಕಾರ್ಯ ಮಾಡಲಾಗುತ್ತಿದೆ.

Exit mobile version