Site icon Suddi Belthangady

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಗೆ ರಾಜ್ಯಮಟ್ಟದ ರಾಷ್ಟ್ರಕವಿ ಕುವೆಂಪು ರತ್ನ ಪ್ರಶಸ್ತಿ ಪ್ರಧಾನ

ಬೆಳ್ತಂಗಡಿ: ಮೈತ್ರಿ ಕಲಾತಂಡ ಕನಕ ನಗರ ಜೆಪಿ ನಗರ ಬೆಂಗಳೂರಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಪ್ರಧಾನ ಸಮಾರಂಭ ಮತ್ತು ಸಾಂಸ್ಕೃತ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರನ್ನು ರಾಜ್ಯಮಟ್ಟದ ರಾಷ್ಟ್ರಕವಿ ಕುವೆಂಪುರ ರತ್ನ ಪ್ರಶಸ್ತಿ ನೀಡಿ ಮೈತ್ರಿ ಕಲಾ ತಂಡದ ಅಧ್ಯಕ್ಷ ಮಹಾದೇವಣ್ಣ ಗೌರವಿಸಿದರು. ಬಳಿಕ ಮಾತನಾಡಿ ಸದಾ ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸ್ವಚ್ಛಾಲಯ ಇಂತಹ ಕಾರ್ಯಕ್ರಮಗಳನ್ನು ಸಮಾಜದಿಂದ ಸಮಾಜಕ್ಕಾಗಿ ತನ್ನೆಲ್ಲ ಶ್ರೇಯಸ್ಸನ್ನು ಮುಡಿಪಾಗಿಟ್ಟು ಬಡವರ ಜೀವನಕ್ಕಾಗಿ ತನ್ನೆಲ್ಲ ದಿನಗಳನ್ನೇ ಮೀಸಲಿಡುವಂತಹ ರಾಜ ಕೇಸರಿ ಸಂಘಟನೆಯ ದೀಪಕ್ ಜಿ. ಅಂತವರು ಈಗಿನ ಕಾಲದಲ್ಲಿ ಸಿಗುವವರು ತುಂಬಾ ವಿರಳ ಇಂತಹ ಸಂಘಟನೆಗಳು ಇನ್ನಷ್ಟು ಬೆಳೆದು ಬರಲಿ ಎಂದು ಇವರಿಗೆ ಇನ್ನಷ್ಟು ಪ್ರಶಸ್ತಿಗಳ ಬರಲಿ ಪ್ರಶಂಶಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸ್ಥಾಪಕ, ಕರ್ನಾಟಕ ಜನಸೇವಾ ಟ್ರಸ್ಟ್ ರಾಷ್ಟ್ರಧ್ಯಕ್ಷ, ಭಾರತೀಯ ಜನಸೇವ ಪರಿಷತ್ ಕರ್ನಾಟಕ ಪ್ರಖ್ಯಾತ ನಿರಾಶ್ರಿತರ ಸೇವಕ ಪ್ರಶಾಂತ್ ಚಕ್ರವರ್ತಿ ಮಾತನಾಡಿ ರಾಜ ಕೇಸರಿ ಸಂಘಟನೆ ಯಾರು ಮಾಡದಂತಹ ವಿಶಿಷ್ಟ ಶೈಲಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಇದು ನಮ್ಮ ರಾಜ್ಯಕ್ಕೆ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದಂತಹ ರಾಜ ಕೇಸರಿ ಪದಾಧಿಕಾರಿಗಳಿಗೆ ಸ್ಮರಣಕ್ಕೆ ನೀಡಿ ಗೌರವಿಸಿದರು.

Exit mobile version