Site icon Suddi Belthangady

ರಸ್ತೆಯಲ್ಲಿ ಸಿಕ್ಕಿದ ರೂ. 9 ಲಕ್ಷ ಮೌಲ್ಯದ ಚಿನ್ನವನ್ನು ಹಿಂತಿರುಗಿಸಿ ಕೊಟ್ಟು ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಸುರೇಶ್ ಎಂ.ಬಿ.

ಕಳೆಂಜ: ರಸ್ತೆಯಲ್ಲಿ ಸಿಕ್ಕಿದ ರೂ. 9 ಲಕ್ಷ ಮೌಲ್ಯದ ಚಿನ್ನವನ್ನು ವಾರೀಸುದಾರರಿಗೆ ಹಿಂತಿರುಗಿಸಿ ಕೊಟ್ಟು ಪ್ರಾಮಾಣಿಕತೆ ಮೆರೆದ ಪುದುವೆಟ್ಟು ಗ್ರಾಮದ ಮಿಯ್ಯಾರು ನಿವಾಸಿ ಹರಿಕೃಷ್ಣ ಆಟೋ ಚಾಲಕ ಸುರೇಶ್ ಎಂ.ಬಿ. ಇವರ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೇ.24ರಂದು ಕಳೆಂಜ ಗ್ರಾಮದ ಮಿಯ್ಯಾರು ಕೆಮ್ಮಟ್ಟೆ ರಸ್ತೆಯಲ್ಲಿ ಸರಿ ಸುಮಾರು 9 ಲಕ್ಷ ಮೌಲ್ಯದ ಚಿನ್ನವನ್ನು ಹರೀಶ್ ಬೆಂಗದಗಂಡಿರವರು ಕಳೆದುಕೊಂಡಿದ್ದರು. ಆ ಚಿನ್ನಾಭರಣ ಆಟೋ ಚಾಲಕ ಸುರೇಶ್ ಎಂ.ಬಿ. ರವರಿಗೆ ಸಿಕ್ಕಿರುತ್ತದೆ. ಕೂಡಲೇ ಚಿನ್ನವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Exit mobile version