Site icon Suddi Belthangady

ಬೆಳ್ತಂಗಡಿಯ ಹಿಪ್ಪವೇ ಹಿಪ್ಪದಜ್ಜನ ಮೂಲಸ್ಥಾನ:ತಾಲೂಕಿನ ಕಾರ್ಣಿಕ ದೈವ ಅಜ್ಜನ ಬಗ್ಗೆ ಅನೇಕರಿಗೆ ಈಗಲೂ ಮಾಹಿತಿ ಇಲ್ಲ

ಬೆಳ್ತಂಗಡಿ ತಾಲೂಕು ದೇವರ ನಾಡು, ದೈವ ಬೀಡು. ಇಲ್ಲಿರುವಷ ದೇವಸ್ಥಾನಗಳು, ದೈವಸ್ಥಾನಗಳು ಯಾವ ತಾಲೂಕಿನಲ್ಲಿಯೂ ಇಲ್ಲ. ಹಾಗಾಗಿ ಧಾರ್ಮಿಕ ಕ್ಷೇತ್ರಗಳ ವಿಷಯದಲ್ಲಿ ಬೆಳ್ತಂಗಡಿ ಸಮೃದ್ಧ. ಹೆಚ್ಚಿನ ಮಂದಿ ದೈವದ ಮೇಲೂ ನಂಬಿಕೆ ಇರಿಸಿದ್ದಾರೆ. ಅನೇಕ ಪವಾಡಪುರುಷರು ದೈವಗಳಾಗಿ ನಂಬಿದವರಿಗೆ ಇಂಬು ಕೊಡುತ್ತಿದ್ದಾರೆ. ಅವರಲ್ಲಿ ವಿಶೇಷವಾಗಿ ಕಾರ್ಣಿಕದ ಅಜ್ಜನಾಗಿ ಬೆಳ್ತಂಗಡಿಯ ಹಲವಾರು ಮಂದಿ ಆರಾಧನೆ ಮಾಡುವಂತಹ ಹಿಪ್ಪದಜ್ಜ ಕೂಡ ಒಬ್ಬರು.

ಹಿಪ್ಪದಜ್ಜನ ಊರು ಹಿಪ್ಪ: ತಾಲೂಕಿನ ಬೆಳಾಲು ಗ್ರಾಮದ ನಾರ್ಯ ಸಮೀಪದ ಹಿಪ್ಪ ಎಂಬಲ್ಲಿನ ಮನೆಯೇ ಹಿಪ್ಪದ ಅಜ್ಜನ ಮೂಲಸ್ಥಾನ. ಇಲ್ಲಿ ಹಿಪ್ಪದಜ್ಜನನ್ನು ಅನೇಕ ವರ್ಷಗಳಿಂದ ಕಾರ್ಣಿಕ ದೈವ ಅಜ್ಜನಾಗಿ ಭಕ್ತಿಯಿಂದ ಆರಾಧಿಸಲಾಗುತ್ತಿದೆ. ಹಿಪ್ಪಕ್ಕೆ ಹೋದರೆ ಅವರ ಮನೆ ಈಗಲೂ ಇದೆ. ಪವಾಡ ಪುರುಷನಾಗಿ ಮೆರೆದ ಹಿಪ್ಪದಜ್ಜರ ಕಾರ್ಣಿಕಗಳು ಒಂದೆರಡಲ್ಲ. ಹಿಪ್ಪದಜ್ಜ ಎಂದರೆ ಕಪಟರಿಗೆ ಭಯವೂ ಇದೆ. ಮೋಸ ವಂಚನೆ ದರೋಡೆಯಂತಹ ಕೃತ್ಯಗಳು ನಡೆದಾಗ ಅಜ್ಜನನ್ನು ಕರೆದರೆ ಸಾಕು. ಅವರ ಮಹಿಮೆ, ಕಾರ್ಣಿಕ ಮೆರೆದ ಹಲವು ನಿದರ್ಶನಗಳು ಇಲ್ಲಿವೆ. ಹಲವು ಶತಮಾನಗಳಿಂದ ಇಲ್ಲಿನ ಜನ ಎಲ್ಲಾ ದೈವಗಳಂತೆ ಹಿಪ್ಪದ ಅಜ್ಜನನ್ನೂ ಪೂಜಿಸಿಕೊಂಡು ಬರುತ್ತಿದ್ದಾರೆ. ಹಿಪ್ಪ ಎನ್ನುವ ಮನೆಯಲ್ಲಿ ಇದ್ದ ಅಜ್ಜ ಆಗಿನ ಕಾಲದಲ್ಲಿ ಜ್ಯೋತಿಷಿ, ಮಂತ್ರವಾದಿಯಾಗಿ ಇದ್ದರು ಎನ್ನುತ್ತಾರೆ. ಅವರ ಕಾಲಾನಂತರ ಅಜ್ಜನೇ ಶಕ್ತಿಯಾಗಿ, ಮಾಯದಲ್ಲಿ ಆ ಮನೆಯನ್ನು, ಆ ಊರನ್ನು ಕಾಯುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ದೈವಗಳಿಗೆ ನೀಡುವ ಅಗೇಲು, ವಷದ ಸೇವೆಯಂತೆ ಅಜ್ಜನಿಗೂ ನಡೆಯುತ್ತಾ ಬಂದಿದೆ. ಕ್ರಮೇಣ ಇಡೀ ತಾಲೂಕಿನ ಹೆಚ್ಚಿನ ಮನೆಗಳಲ್ಲಿ ಹಿಪ್ಪದ ಅಜ್ಜನನ್ನು ನಂಬಲು ಶುರು ಮಾಡಿದ್ದಾರೆ. ಅಜ್ಜನಿಗೆ ಸೇವೆ ನೀಡಿ ಕುಟುಂಬಸ್ಥರು ಗ್ರಾಮಸ್ಥರನ್ನು ಕರೆದು ಪ್ರಸಾದದ ರೂಪದಲ್ಲಿ ಅನ್ನಸಂತರ್ಪಣೆ ಮಾಡುವ ಕ್ರಮ ನಡೆಯುತ್ತಿದೆ.

ಹಿಪ್ಪದಜ್ಜನ ಮರಿಮೊಮ್ಮಗ: ಹಿಪ್ಪದಲ್ಲಿ ಹಿಪ್ಪದಜ್ಜನ ಮೊಮ್ಮಗನ ಮೊಮ್ಮಗ ಅಂದರೆ ಆರನೇ ತಲೆಮಾರಿನ ವಂಶಸ್ಥರಾದ ಸೂರಪ್ಪಜ್ಜ ಇದ್ದಾರೆ. ಅಜ್ಜನಿಗಾಗಿ ಗುಡಿ ನಿರ್ಮಾಣ ಮಾಡಿ ಅಜ್ಜನ ಮಾಯಕ್ಕೆ ಶಕ್ತಿಯಾಗಿರುವ ಶನಿಗುಳಿಗನ ಮೂರ್ತಿಯನ್ನು ಇಟ್ಟು ಆರಾಧನೆ ಮಾಡಲಾಗುತ್ತಿದೆ. ಸೂರಪ್ಪಜ್ಜರೇ ಹಿಪ್ಪದಜ್ಜನಿಗೆ ಬೇಕಾಗುವ ಸೇವೆಯನ್ನು ಮಾಡುತ್ತಿದ್ದು ಹಿಪ್ಪದ ಮನೆಗೆ ಕಳೆ ತಂದುಕೊಟ್ಟಿದ್ದಾರೆ.

ಅಜ್ಜ ಮಲಗುತ್ತಿದ್ದ ಕಲೆಂಬಿ: ಹಿಪ್ಪದಜ್ಜ ವಾಸ ಮಾಡುತ್ತಿದ್ದ ಮಣ್ಣಿನ ಮನೆ ಜೊತೆ ವಿಶೇಷವಾಗಿ ಅವರು ಮಲಗುತ್ತಿದ್ದ ಕಲೆಂಬಿ ಕೂಡ ಇದೆ. ಆರು ಶತಮಾನಗಳ ಹಿಂದಿನ ಕಲೆಂಬಿಯಲ್ಲಿ ೧೨ ಮುಡಿ ಅಕ್ಕಿ ಹಾಕಲಾಗುತ್ತಿತ್ತು. ಅದರ ಮೇಲೆ ಹಿಪ್ಪದಜ್ಜ ಮಲಗಿದರೆ ಅದರಿಂದ ಅವರನ್ನು ಎzಳಿಸಲು ಅಸಾಧ್ಯವಾಗಿತ್ತು ಎನ್ನುತ್ತಾರೆ ಸೂರಪ್ಪಜ್ಜ. ಈ ಕಲೆಂಬಿ ಅವರ ನೆನಪಿಗಾಗಿ ಹಿಪ್ಪದ ಮನೆಯಲ್ಲಿಯೇ ಇದೆ.

ನಾನಾ ಕಡೆ ಅಜ್ಜನ ಆರಾಧನೆ: ತುಳುನಾಡಿನ ಅನೇಕರು ಹಿಪ್ಪದಜ್ಜನನ್ನು ನಂಬಿಕೊಂಡು ಬರುತ್ತಿದ್ದಾರೆ. ಅದರಲ್ಲಿಯೂ ಬೆಳ್ತಂಗಡಿ ತಾಲೂಕಿನ ನಾವೂರು, ಮಿತ್ತಬಾಗಿಲು, ಚಾರ್ಮಾಡಿ, ಧರ್ಮಸ್ಥಳ, ಬೆಳಾಲು, ಸೇರಿದಂತೆ ಅನೇಕ ಗ್ರಾಮದ ಮನೆಗಳಲ್ಲಿ ಭಕ್ತರು ಪ್ರತೀ ವಷ ಅಗೇಲು ಸೇವೆ ನೀಡುತ್ತಾ ಬರುತ್ತಿದ್ದಾರೆ. ಕೊರಗಜ್ಜನನ್ನು ಹೇಗೆ ನಂಬುತ್ತಾರೋ ಅದೇ ರೀತಿಯಲ್ಲಿ ಇಲ್ಲಿ ಹಿಪ್ಪದ ಅಜ್ಜನನ್ನು ನಂಬಿಕೊಂಡು, ಹರಕೆ ಕಟ್ಟಿಕೊಂಡು, ಹರಕೆ ತೀರಿಸಿಕೊಂಡು ಭಕ್ತಿಯಿಂದ ಸೇವೆ ಮಾಡುತ್ತಾರೆ.

ಪರ ಊರಿನಲ್ಲೂ ನಂಬುತ್ತಾರೆ: ಅನೇಕ ಅಜ್ಜನ ಭಕ್ತರು ತಮ್ಮ ಮನೆಗಳಲ್ಲಿ ಪವಿತ್ರ ಜಾಗವನ್ನು ನೋಡಿ ಕಟ್ಟೆ ಅಥವಾ ಕಲ್ಲು ಇಟ್ಟು ನಂಬುತ್ತಾರೆ. ಪರವೂರಿನಲ್ಲೂ ನಂಬುವ ಅನೇಕ ಕುಟುಂಬಗಳಿವೆ. ಬೆಳ್ತಂಗಡಿಯಿಂದ ತೆರಳಿ ಬೇರೆ ಊರಿನಲ್ಲಿ ನೆಲೆಸಿರುವ ಮಂದಿಯ ಮನೆಗಳಲ್ಲಿ, ಹೆಣ್ಣು ಕೊಟ್ಟ ಮನೆಗಳಲ್ಲಿ ದಕ್ಷಿಣ ಕನ್ನಡ ಸಹಿತ ಹಲವು ಕಡೆಗಳಲ್ಲಿ ಹಿಪ್ಪದಜ್ಜನನ್ನು ಪೂಜಿಸಲಾಗುತ್ತದೆ. ಅಜ್ಜನನ್ನು ನಂಬಿದರೆ ಕಷ, ಸಂಕಷಕ್ಕೆ ರಕ್ಷಣೆ ನೀಡುತ್ತಿದ್ದಾರೆ ಎನ್ನುವ ನಂಬಿಕೆ ಇದೆ.

ಹಿಪ್ಪದಜ್ಜನ ಕಾರ್ಣಿಕ:ಸೂರಪ್ಪಜ್ಜ ಹೇಳುವ ಹಾಗೆ ಹಿಪ್ಪದಜ್ಜನ ಅನೇಕ ಕಾರ್ಣಿಕ ಅನುಭವ ಕಥೆಗಳು ಇವೆ. ಹಿಪ್ಪದಜ್ಜ ಯಾರಲ್ಲಾದರೂ ನೀವು ನಿಂತಿರಿ, ಈಗಲೇ ಬರುತ್ತೇನೆ ಎಂದು ಹೇಳಿ ಹೋದರೆ, ಅಜ್ಜ ವಾಪಾಸಾಗುವವರೆಗೆ ಅವರು ನಿಂತುಕೊಂಡೇ ಇರುತ್ತಾರಂತೆ. ಅಷ್ಟೇ ಅಲ್ಲದೆ ಯಾವುದೇ ಖಾಯಿಲೆ ಇದ್ದರೂ ಯಾವುದೇ ಸೊಪ್ಪನ್ನು ಕೈಯಲ್ಲಿ ಅರೆದು ಕುಡಿಸಿದರೆ, ರೋಗ ವಾಸಿಯಾಗುತ್ತಿತ್ತಂತೆ. ನೀರ ಮೇಲೆ, ಎಲೆಯ ಮೇಲೆ, ಮಲ್ಲಿಗೆಯ ರೀತಿ ಕೂತು ಹೋಗುತ್ತಿದ್ದರಂತೆ. ನನ್ನನ್ನು ಯಾರಿಂದರೂ ತೂಕ ಮಾಡಲು ಸಾಧ್ಯವಿಲ್ಲವೆನ್ನುತ್ತಿದ್ದರಂತೆ. ಹೀಗೆ ಅನೇಕ ಪವಾಡಗಳು ಅವರಿಂದಾಗಿದೆ.
ಅವರ ಸಾವು ಕೂಡ ಪವಾಡದಂತೆ ಆಗಿದೆಯಂತೆ. ಹಿಪ್ಪದಜ್ಜ ನನ್ನ ಸಾವು ಈದಿನ, ಇಷ್ಟು ಹೊತ್ತಿಗೆ ಆಗುತ್ತದೆ ಎಂದು ಮುಂಚಿತವಾಗಿಯೇ ಹೇಳಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಪ್ಪದಜ್ಜ ಎನ್ನುವ ಶಕ್ತಿ ಇರುವ ಬಗ್ಗೆ ಹೆಚ್ಚಿನ ಪ್ರಚಾರವಿಲ್ಲ. ಆದರೆ ಹಿಪ್ಪದಜ್ಜ ಶತಮಾನಗಳಿಂದ ಮನೆಯ, ಊರಿನ ಎಲ್ಲಾ ಮನೆಯ ಅಗೇಲು ಸೇವೆ ಪಡೆಯುತ್ತಾ ಭಕ್ತಿಗೆ ಒಲಿಯುವ ಶಕ್ತಿಯಾಗಿ ಮೆರೆಯುತ್ತಿದ್ದಾರೆ.

ಅಜ್ಜನಿಗೆ ಹರಕೆ ಹೇಗೆ ?: ವಷದಲ್ಲಿ ಒಂದೆರಡು ಬಾರಿ ದೈವಗಳಿಗೆ ಹರಕೆ ರೂಪದಲ್ಲಿ ಅಗೇಲು ಸೇವೆ ಕೊಡುವ ಕ್ರಮದಂತೆಯೇ ಮುಸ್ಸಂಜೆ ಹೊತ್ತಲ್ಲಿ ಎಲ್ಲಾ ಕುಟುಂಬ ಸದಸ್ಯರು ಒಟ್ಟು ಸೇರಿ ಊರಿನ ನಾಟಿ ಕೋಳಿಯ ಕತ್ತು ಹಿಸುಕಿ (ಕೋರಿ ಬಂಟೆ) ಕೊಂದು ಬಳಿಕ ಅದರ ಪದಾರ್ಥ ಮಾಡಿ ರಾತ್ರಿಯಾಗುತ್ತಲೇ ಅಜ್ಜನ ಸಾನಿಧ್ಯಕ್ಕೆ ಕುಟುಂಬ ಸಮೇತರಾಗಿ ತೆರಳಿ ಬಾಳೆಯ ಎಲೆಯಲ್ಲಿ ಅನ್ನ, ರೊಟ್ಟಿ, ಕೋಳಿಯ ಪದಾರ್ಥ ಬಡಿಸಿ, ಅರಶಿನ ನೀರು ಇಟ್ಟು ಧೂಪ ಆರತಿ ಮಾಡಿ ಭಕ್ತಿಯಿಂದ ಹಿಪ್ಪದ ಅಜ್ಜನಿಗೆ ನಮಿಸಿ ಹರಕೆ ಸಲ್ಲಿಸುವ ಕ್ರಮ ಇಂದಿಗೂ ಚಾಲ್ತಿಯಲ್ಲಿದೆ. ಅದರೊಂದಿಗೆ ಮನೆಗೆ ಯಾವುದೇ ತೊಂದರೆಗಳು ಬಾರದಿರಲಿ ಎಂದು ಬಾಳೆ ಎಲೆಯಲ್ಲಿ ತೆಂಗಿನ ಕಾಯಿಯನ್ನು ಅಜ್ಜನ ಸಾನಿಧ್ಯದಲ್ಲಿ ಇಟ್ಟು, ಅಡುಗೆ ಮನೆಯ ಬೂದಿಯನ್ನೂ ಇಟ್ಟು ಪೂಜೆ ಸಲ್ಲಿಸಿ, ಬೂದಿಯನ್ನು ಅಜ್ಜನ ಗಂಧ ಎಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿ ಹಿಡಿದು ಮನೆಗೆ ಪ್ರದಕ್ಷಿಣೆ ಮಾಡಿ ನಂತರ ಮನೆಯ ಮುಂಭಾಗದಲ್ಲಿ ಕಟ್ಟುವ ಕ್ರಮ ಇದೆ. ಇದು ಮನೆಗೆ ರಕ್ಷೆ ಎನ್ನುವ ನಂಬಿಕೆ. ಪ್ರತಿ ವರ್ಷ ಅಗೇಲು ಸೇವೆ ನೀಡುವಾಗ ತೆಂಗಿನಕಾಯಿಯನ್ನು ಬದಲಾಯಿಸುತ್ತಾರೆ.

Exit mobile version