Site icon Suddi Belthangady

ವಿಕಸಿತ ಕೃಷಿ ಸಂಕಲ್ಪ, ಅಭಿಯಾನ, ಕೃಷಿ ಮಾಹಿತಿ ಶಿಬಿರ

ತಣ್ಣೀರುಪಂತ: ಪ್ರಾ.ಕೃ.ಪ.ಸ.ಸಂಘ ಕಲ್ಲೇರಿ, ಕರಾಯ ಗ್ರಾಮ, ಬೆಳ್ತಂಗಡಿ ತಾಲೂಕು ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ಕಲ್ಲೇರಿ, ಕರಾಯ ತಣ್ಣೀರುಪಂತ ಕೃಷಿ ವಿಜ್ಞಾನ ಕೇಂದ್ರ ದ.ಕ. ಮಂಗಳೂರು ಇದರ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ, ಅಭಿಯಾನ, ಕೃಷಿ ಮಾಹಿತಿ ಶಿಬಿರ ಜೂ.12ರಂದು ತಣ್ಣೀರುಪಂತ ಪ್ರಾ.ಕೃ.ಪ. ಸಂಘದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತಣ್ಣೀರುಪಂತ ಪ್ರಾ.ಕೃ.ಪ. ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ವಿಜ್ಞಾನ ಕೇಂದ್ರ ದ.ಕ. ಮಂಗಳೂರಿನ ಹಿರಿಯ ವಿಜ್ಞಾನಿಗಳಾದ ಹರೀಶ್ ಶೆಣೈ, ರಶ್ಮಿ ಆರ್., ಶಿವಕುಮಾರ್, ಗೇರು ಸಂಶೋಧನಾ ಕೇಂದ್ರ ಪುತ್ತೂರಿನ ನಿರ್ದೇಶಕಿ ವನಿತಾರವರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಕಡಿಮೆ ಖರ್ಚಿನಲ್ಲಿ ಕೃಷಿ ಬೆಳೆದು ಹೆಚ್ಚಿನ ಲಾಭ, ಹೊಸ ಬೀಜಗಳು, ನಿಖರವಾದ ಹವಾಮಾನ ಮಾಹಿತಿ, ಸರಕಾರದ ನಾನಾ ಲಾಭದಾಯಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ವಿಜಯ ಕುಮಾರ್ ಕಲ್ಲಲಿಕೆ, ಸಹಕಾರಿ ಸಂಘದ ಉಪಾಧ್ಯಕ್ಷ ಸುನಿಲ್ ಅಣ್ಣವು, ಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ಕುಮಾರ್, ದುಗ್ಗಪ್ಪ ಗೌಡ ಪೊಸೋಂದೊಡಿ,ಲಿಂಗಪ್ಪ ನಾಯ್ಕ ಹಾಗೂ ಕೃಷಿಕ ಬಾಂಧವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಗದೀಶ್ ಮೈರಾ ಸ್ವಾಗತಿಸಿದರು. ಜಯಾನಂದ ಕಲ್ಲಾಪು ವಂದಿಸಿದರು.

Exit mobile version